Home Blog Page 3

ಚುನಾವಣೆಯ ವೇಳೆ ಉತ್ತರದವರು ಬಾರಿಸುವರು ಕನ್ನಡ ಡಿಂಡಿಮವಾ….!

0

ಚುನಾವಣೆಯ ವೇಳೆ ಉತ್ತರದವರು ಬಾರಿಸುತಿಹರು ಕನ್ನಡ ಡಿಂಡಿಮವಾ….!ಉತ್ತರ ದಕ್ಷಿಣ ದಿಕ್ಕುಗಳು ಹೇಗೆ ವಿರುದ್ಧವಾಗಿವೆಯೋ ಹಾಗೆಯೇ ಭಾರತದಲ್ಲಿ ಉತ್ತರದವರು – ದಕ್ಷಿಣದವರು ಎಂಬ ಮಾತು ಆಗಾಗ ಕೇಳಿ ಬರುತ್ತಲೇ ಇದೆ. ಉತ್ತರ ಭಾರತೀಯರು ತಾವೇ ಮೂಲ ಭಾರತೀಯರು ಎಂದೋ ದಕ್ಷಿಣದವರು ನಾವೇ ಭಾರತದ ಮೂಲ ನಿವಾಸಿಗಳು ಎಂದೋ, ಆಗಾಗ ಕೆಸರೆರಚಾಡಿಕೊಳ್ಳುತ್ತಲೇ ಇರುತ್ತಾರೆ. ಆದರೆ ದಕ್ಷಿಣಭಾರತದಲ್ಲಿ ಅತಿ ಹೆಚ್ಚು ಪ್ರಾದೇಶಿಕ ಭಾಷೆಗಳಿವೆ ಆದರೆ ಉತ್ತರದವರಿಗೆ ಬೇರೆ ಬೇರೆ ಪ್ರಾದೇಶಿಕ ಭಾಷೆಗಳಿದ್ದರೂ ಹಿಂದಿ ಭಾಷೆಯು ಆ ಎಲ್ಲಾ ಭಾಷೆಗಳನ್ನೂ ಮೀರಿಸಿ ಅಲ್ಲಿನವರಿಗೆ ಹತ್ತಿರವಾಗಿದೆ. ಆದ್ದರಿಂದಲೇ ಹಿಂದಿ ರಾಷ್ಟç ಭಾಷೆ ಎಂದು ಘೋಷಣೆಯಾಗಿಲ್ಲದಿದ್ದರೂ ಹಿಂದಿಯೇ ರಾಷ್ಟಿçÃಯ ಭಾಷೆಯಾಗಬೇಕೆಂದು ಪಟ್ಟು ಹಿಡಿದು ಕೂತಿದ್ದಾರೆ ಉತ್ತರದವರು. ಆದರೆ
ಈ ವಾದಕ್ಕೆ ದಕ್ಷಿಣದವರು ಸೊಪ್ಪು ಹಾಕದೆ ತಮ್ಮ ಪ್ರಾದೇಶಿಕ ಭಾಷೆಗಳನ್ನೆÃ ಬಳಸುವುದೆಂದು ಪಟ್ಟು ಬಿಡದೆ ವಾದಿಸುತ್ತಿದ್ದಾರೆ. ದಕ್ಷಿಣದಲ್ಲಿ ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಮರಾಠಿ ಎಲ್ಲಾ ಭಾಷೆಗಳಿಗೂ ಅವುಗಳದ್ದೆÃ ಆದ ಇತಿಹಾಸವಿದೆ. ಆ ಭಾಷೆಗಳಿಗೊಂದು ವೈಭವವಿದೆ.
ಪರಂಪರೆ ಇದೆ. ಆದರೆ ಉತ್ತರದವರು ಅದಕ್ಕೆಲ್ಲಾ ಕವಡೆ ಕಿಮ್ಮತ್ತೂ ನೀಡದೆ ಉದ್ದಟತನ ತೋರುತ್ತಾ ಬರುತ್ತಿದ್ದಾರೆ. ರಾಜಕೀಯವಾಗಿಯೂ ಉತ್ತರ ದಕ್ಷಿಣ ಬೇಧಭಾವಗಳು ದೂರವಾಗಿಲ್ಲ.
ಆರ್ಯರು – ದ್ರಾವಿಡರ ಕಾಲದಿಂದ ಈ ಜಿದ್ದಾ ಜಿದ್ದಿ ನಡೆಯುತ್ತಲೇ ಬಂದಿದೆ. ಆದರೀಗ ಸ್ವಲ್ಪ ಸುಧಾರಿಸಿದೆ ದಕ್ಷಿಣದವರಿಗೆ ತಮ್ಮತನದ ಅರಿವಾಗಿದೆ ಹಿಂದಿಯನ್ನು ರಾಷ್ಟಿçÃಯ ಭಾಷೆಯಾಗಿ ಸ್ವಿÃಕರಿಸಲಾರೆವು ಎಂದು ಬೀದಿಗಿಳಿದು ಹೋರಾಟವನ್ನೂ ಮಾಡುತ್ತಿದ್ದಾರೆ. ಆದರೂ ಇನ್ನೂ ಈ ವಿಷಯಕ್ಕೊಂದು ಸೂಕ್ತ ಅಂತ್ಯ ಸಿಕ್ಕಿಲ್ಲ. ಉತ್ತರದವರು ಇಂದಿಗೂ ರಾಜಕೀಯವಾಗಿ ದಕ್ಷಿಣದವರನ್ನು ತುಳಿಯುತ್ತಲೇ ಇದ್ದಾರೆ. ಇಂದಿಗೂ ದೇಶದ ಅತ್ಯನ್ನತ ಹುದ್ದೆಗಳೆಲ್ಲಾ ಹೆಚ್ಚು ಉತ್ತರದವರಿಂದ ತುಂಬಿದೆಯೇ ಹೊರದು ದಕ್ಷಿಣದವರಿಗೆ ಆ ಸ್ಥಾನ ಸಿಕ್ಕಿರುವುದು ಕೆಲವೇ ಕೆಲವು ಮಂದಿಗಷ್ಟೆÃ. ಇಂದಿಗೂ ಕೇಂದ್ರ ಸರ್ಕಾರ ಮಂಡಿಸುವ ವಾರ್ಷಿಕ ಆಯ-ವ್ಯಯದಲ್ಲಿ ಅಗ್ರಪಾಲು ದೊರೆಯುವುದು ಉತ್ತರದವರಿಗೇ, ದಕ್ಷಿಣದವರಿಗೆ ಸಿಕ್ಕುವುದು ಕಡಿಮೆಯೇ.
ರಾಷ್ಟç ರಾಜಕೀಯ ಪಕ್ಷಗಳೂ ಅಷ್ಟೆÃ ಉತ್ತರದಲ್ಲೆÃ ಹುಟ್ಟಿ ಅಲ್ಲೆÃ ಬೆಳದಿರುವಂತಹವು ದಕ್ಷಿಣದ ಯಾವ ಪಕ್ಷವೂ ಇದುವರೆಗೂ ಅಲ್ಲಿ ಪೂರ್ಣ ನೆಲೆ ಕಂಡುಕೊಳ್ಳಲಾಗಿಲ್ಲ. ಭಾರತ ಎಂದರೆ ಉತ್ತರದ ರಾಜ್ಯಗಳೇ ಎಂಬುದಾಗಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಬಿಂಬಿಸುತ್ತಿವೆ. ಆದರೆ ಕೆಲ ವಿಷಂiÀiಗಳೇಕೋ ದಕ್ಷಿಣದವರಿಗೆ ಅರ್ಥವಾಗುತ್ತಲೇ ಇಲ್ಲ.
ಇನ್ನು ಭಾಷೆಗಳ ವಿಷಯಕ್ಕೆ ಬರುವುದಾದರೆ ಹಿಂದಿಯೇ ರಾಷ್ಟç ಭಾಷೆ ಎಂದು ಬಿಂಬಿಸುವ ಉತ್ತರದವರು ಅದ್ಯಾಕೋ ದಕ್ಷಿಣ ರಾಜ್ಯಗಳಲ್ಲಿ ಚುನಾವಣೆಗಳು ಹತ್ತಿರ ಬರುತ್ತವೆಯೋ ಅಥವಾ ಘೋಷಣೆಯಾಗುತ್ತವೋ ಆ ಕ್ಷಣದಿಂದ ಉತ್ತರದ ಎಲ್ಲ ರಾಷ್ಟಿçÃಯ ಪಕ್ಷಗಳ ಮುಖಂಡರಿಗೂ ದಕ್ಷಿಣದ ಭಾಷೆಗಳ ಮೇಲೆ ಪ್ರಿÃತಿ ಉಕ್ಕಿಹರಿಯುತ್ತದೆ. ಪ್ರಚಾರಕ್ಕೆ ಬಂದಾಗ “ನಮಸ್ಕಾರ” ಅಂತ ಮಾತು ಪ್ರಾರಂಭಿಸಿ ಮರಳು ಮಾಡುತ್ತಿದ್ದಾರೆ.
ಕರ್ನಾಟಕ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಯವರಾದ ನರೇಂದ್ರ ಮೋದಿಯವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ರಾಷ್ಟಾçಧ್ಯಕ್ಷರಾದ ಅಮಿತ್ ಶಾ ಎಲ್ಲರೂ ಕನ್ನಡ ನಮ್ಮ ಭಾಷೆ, ನಾನೂ ಕನ್ನಡಿಗ ಎಂದೆಲ್ಲಾ ಹೇಳುತ್ತಾ ಭಾಷಣ ಮಾಡುತ್ತಿದ್ದಾರೆ. ಅದರಲ್ಲೂ ಕನ್ನಡ ಪದ ಬಳಕೆ ಮಾಡುತ್ತಾ ನಮ್ಮ ಭಾಷೆಯ ಸೊಗಡನ್ನೂ ಹಾಳು ಮಾಡುತ್ತಿರುವುದು ಬೇಸರದ ಸಂಗತಿ.
ಕನ್ನಡ ಮಾತನಾಡಲು ಪ್ರಯತ್ನಿಸುತ್ತಿರುವುದು ಸಂತಸವೇ ಆದರೆ ಆ ಭಾಷೆಯ ಮೇಲಿನ ಪ್ರಿÃತಿಯಿಂದ ಮಾತನಾಡಲು ಪ್ರಯತ್ನಿಸಿದ್ದರೆ ನಮ್ಮದೂ ಆಕ್ಷೆÃಪವಿರಲಿಲ್ಲ ಆದರೆ ಬರೀ ಚುನಾವಣಾ ದೃಷ್ಟಿಯಿಂದ ಜನರನ್ನು ಮರಳು ಮಾಡಲು ಮಾತನಾಡಿದ್ದರಿಂದಲೇ ಬೇಸರವಾಗಿದ್ದು. ದಕ್ಷಿಣದವರನ್ನು ಓಲೈಸಲು ಅವರ ಭಾಷೆ ಮೇಲೆ ಪ್ರಿÃತಿ ಇರುವಂತೆ ನಟಿಸುವ ಬದಲು ಕನಿಷ್ಟ ಒಮ್ಮೆಯಾದರೋ ಮನಸಾರೆ ಮಾತನಾಡಲು ಪ್ರಯತ್ನಿಸಲಿ ಇಲ್ಲಿನವರ ಭಾವನೆಗಳು ಆಗಲಾದರೂ ನಿಮ್ಮ ಅರಿವಿಗೆ ಬರಬಹುದೇನೋ. ವಿಶ್ವೆÃಶ್ವರಾಯನವರನ್ನ ವಿಸ್ವೆÃಸ್ವರಯ್ಯನವರನ್ನಾಗಿ ಮಾಡುವುದು ಬಸವಣ್ಣನವರ ಇವನಾರವ ಇವನಾರವ ಅನ್ನುವುದು ಇವರ್ನ ಇವರ್ನ ಆಗುತ್ತಿರಲಿಲ್ಲ.
ಪ್ರಿಯ ನೇತಾರರೇನಿಮಗೆ ನಮ್ಮ ಭಾಷೆಯ ಸೊಗಡು ತಿಳಿದಿಲ್ಲವಾದರೆ ನಿಮ್ಮ ಸುತ್ತ ಇರುವ ಇಲ್ಲಿನ ಸ್ಥಳೀಯರ ಬಳಿಯಾದರೂ ನೀವಾಡುವ ಭಾಷೆಯ ಭಾವವನ್ನಾದರೂ ತಿಳಿದುಕೊಳ್ಳಿ. ಇಲ್ಲವಾದಲ್ಲಿ ನಿಮ್ಮ ಹಿಂದಿಯಲ್ಲೆÃ ಮಾತನಾಡಿ ನಿಮ್ಮ ಬೊಗಳೆ ಕನ್ನಡ ಪ್ರೆÃಮ ನಮಗೆ ಬೇಕಿಲ್ಲ. ನಮಗೆ ನೀವಾಡುವ ಹಿಂದಿಯು ಅರ್ಥವಾಗದಿದ್ದರೂ ನಿಮ್ಮ ಹಾವ ಭಾವದಿಂದಲೇ ನಿಮ್ಮ ಭಾಷಣವನ್ನು ಅರ್ಥೈಸಿಕೊಳ್ಳಬಲ್ಲೆವು ಅಷ್ಟರ ಮಟ್ಟಿಗಿನ ಜ್ಞಾನ ನಮಗಿದೆ.
ದಯವಿಟ್ಟು ಈ ಚುನಾವಣಾ ವೇಳೆಯ ಭಾಷಾ ಪ್ರೇಮವನ್ನು ಬಿಡಿ
ಭಾಷೆ ಎಂಬುದು-
ಹೃದಯಾಂತರಾಳದ
ಅಕ್ಕರೆ ನುಡಿ;

ಜನ ನಾಯಕರೇ,
ಬೂಟಾಟಿಕೆ ಮಾತನ್ನು
ಬಲವಂತವಾಗಿ
ಆಡಬೇಡಿ!

Source – Sakhigeetha.com

* ಪ್ರಾಚೀನ ಪೂರ್ಣಕುಂಭ * … ಈ ಭಾರತಂ ಲೋಕಪೂಜ್ಯಂ…..! – ಪ್ರೊ ಕೆ.ಎಸ್.ಮಧುಸೂದ

0

ನಮಗೆ ಒಂದು ಭವ್ಯ ಪರಂಪರೆ ಇದೆ! ನಾವು ಮುಂದೆ ಮುಂದೆ ಹೋಗುವ ಭರದಲ್ಲಿ ಬೆನ್ನ ಹಿಂದಿನ ಬೆಳಕಿನತ್ತ ಗಮನ ನೀಡುತ್ತಿಲ್ಲ. ಒಂದು ಪಕ್ಷ ಹಿಂತಿರುಗಿ ನೋಡಿದ್ದೆÃ ಆದರೆ – ಆ ಅಭಿಜಾತ ಕಾವ್ಯಗಳ ಸಾರ… ಯಾಂತ್ರಿಕ ಜೀವನಕ್ಕೆ ಅಮೃತಬಿಂದುಗಳಾಗಿ ಹೊಸ ಹೊಸ ಚೈತನ್ಯ ನೀಡಬಲ್ಲವು.
ಈ ವೃತ್ತವು ಪಂಪನು ಬರೆದಿರುವ ‘ವಿಕ್ರಮಾರ್ಜುನ ವಿಜಯಂ’ ಎನ್ನುವ ಕಾವ್ಯದಲ್ಲಿ ಬರುತ್ತದೆ. ಆ ವೃತ್ತವು ಹೀಗಿದೆ : (ಅರ್ಥಗ್ರಹಿಕೆಯ ದೃಷ್ಟಿಯಿಂದ ಇಲ್ಲಿ ವೃತ್ತವನ್ನು ಬಿಡಿಸಿ ನೀಡಿ ವಿವರಣ ಚಿಹ್ನಗಳನ್ನು ಬಳಸಲಾಗಿದೆ.)
ಚಲದೊಳ್ ದುರ್ಯೋಧನಂ, ನನ್ನಿಯೊಳ್ ಇನತನಯಂ, ಗಂಡಿನೊಳ್ ಭೀಮಸೇನಂ, ಬಲದೊಳ್ ಮದ್ರೆÃಶನ್, ಅತ್ಯುನ್ನತಿಯೊಳ್ ಅಮರ ಸಿಂಧೂದ್ಭವಂ, ಚಾಪವಿದ್ಯಾ ಬಲದೊಳ್ ಕುಂಭೋದ್ಭವಂ, ಸಾಹಸದ ಮಹಿಮೆಯೊಳ್ ಫಲ್ಗುಣಂ, ಧರ್ಮದೊಳ್ ನಿ ರ್ಮಲಚಿತ್ತಂ ಧರ್ಮಪುತ್ರಂ, ಮಿಗಿಲ್ ಇವರ್ಗಳಿನ್, ಭಾರತಂ ಲೋಕಪೂಜ್ಯಂ. (ವಿಕ್ರಮಾರ್ಜುನ ವಿಜಯಂ ಆಶ್ವಾಸ ೧, ಪದ್ಯ ೬೪)
ಪಂಪನು ಮಹಾಭಾರತವು ಏಕೆ ಲೋಕಪೂಜ್ಯ ಗ್ರಂಥವಾಗಿದೆ ಎನ್ನುವುದನ್ನು ಈ ಪದ್ಯದಲ್ಲಿ ಹೇಳುತ್ತಿದ್ದಾನೆ. ಇಲ್ಲಿ ಕೆಲವು ಸೂಕ್ಷö್ಮಗಳಿವೆ. ಅದನ್ನು ಗಮನಿಸುವುದಕ್ಕೆ ಮೊದಲು ಈ ಪದ್ಯದ ಅರ್ಥಗ್ರಹಿಕೆಯನ್ನು ಗಮನಿಸೋಣ.
ಛಲದಲ್ಲಿ-ಅಭಿಮಾನದಲ್ಲಿ ದುರ್ಯೋಧನ, ಸತ್ಯವಂತಿಕೆ-ಸತ್ಯಸಂಧತೆಯಲ್ಲಿ ಸೂರ್ಯಪುತ್ರನಾದ ಕರ್ಣ, ಗಂಡಸುತನದಲ್ಲಿ ಭೀಮಸೇನ, ಬಲದಲ್ಲಿ ಮದ್ರೆÃಶನಾದ ಶಲ್ಯ, ಅತ್ಯಂತ ಉನ್ನತವಾದ ಸಮಗ್ರ ವ್ಯಕ್ತಿತ್ವದಲ್ಲಿ ಅಮರಗಂಗಾನದಿಯ ಪುತ್ರನಾದ ಭೀಷ್ಮ, ಬಿಲ್ವಿದ್ಯಾಬಲದಲ್ಲಿ ಕುಂಭದಲ್ಲಿ ಜನಿಸಿದ ದ್ರೊÃಣ, ಸಾಹಸದ ಮಹಿಮೆಯಲ್ಲಿ ಫಲ್ಗುಣನಾದ ಅರ್ಜುನ, ಧರ್ಮದ ವಿಚಾರದಲ್ಲಿ ನಿರ್ಮಲಿನ ಮನಸ್ಕನಾದ ಧರ್ಮಪುತ್ರ – ಇವರುಗಳು ಅಧಿಕರು, ಇವರುಗಳಿಂದ ಭಾರತವು ಲೋಕಪೂಜ್ಯವಾಗಿದೆ.
ಈ ಪದ್ಯದಲ್ಲಿ ಜೈನಕವಿಯಾದ ಪಂಪನು ಜೈನೇತರ, ವೈದಿಕ ಕೃತಿಯಾದ ಮಹಾಭಾರತ ಎನ್ನುವ ಮಹಾಕಾವ್ಯವು ಏಕೆ ಲೋಕಪೂಜ್ಯವಾಗಿದೆ ಎನ್ನುವುದಕ್ಕೆ ಕಾರಣಗಳನ್ನು ನೀಡುತ್ತಿದ್ದಾನೆ. ಅವನು ನೀಡಿರುವ ಎಂಟು ಪಾತ್ರಗಳೂ ಒಂದೊಂದು ಮೌಲ್ಯಗಳ ಗಣಿಯಾಗಿವೆ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಇಲ್ಲಿ ಕೌರವರ ಕಡೆ – ದರ್ಯೋಧನ, ಕರ್ಣ, ಭೀಷ್ಮ, ಶಲ್ಯ, ದ್ರೊÃಣ – ಈ ಐದು ಪಾತ್ರಗಳನ್ನೂ, ಪಾಂಡವರ ಕಡೆ – ಭೀಮಸೇನ, ಅರ್ಜುನ, ಧರ್ಮಪುತ್ರ – ಈ ಮೂರು ಪಾತ್ರಗಳನ್ನೂ ಹೆಸರಿಸುತ್ತಾನೆ.
ಕೃಷ್ಣ ಮತ್ತು ದ್ರೌಪದಿಯ ಪಾತ್ರಗಳ ಹೆಸರಿನ ಉಸಾಬರಿಗೂ ಹೋಗುವುದಿಲ್ಲ. ಕೃಷ್ಣನು ವೈದಿಕ ದೈವವೆಂದೂ, ಇಲ್ಲಿನ ಎಲ್ಲವೂ ಪುರುಷಪಾತ್ರಗಳಾದದ್ದರಿಂದ ದ್ರೌಪದಿ ಸ್ತಿçÃಪಾತ್ರ ಎನ್ನುವ ಕಾರಣಕ್ಕೆ ಜೈನನಾದ ಪಂಪ ಅವರನ್ನು ಸೂಚಿಸಿಲ್ಲ ಎಂದೂ ವಿಮರ್ಶಕರ ಅಭಿಪ್ರಾಯ. ಇದನ್ನÄ ಕುರಿತ ಚರ್ಚೆಗಳು ಇನ್ನೂ ನಿಂತಿಲ್ಲ. ಇಲ್ಲಿ ಭೀಮಸೇನ, ಶಲ್ಯ, ದ್ರೊÃಣ ಹಾಗೂ ಅರ್ಜುನ ಈ ನಾಲ್ಕು ಪಾತ್ರಗಳ ಮೌಲ್ಯ ಪರಾಕ್ರಮವೇ ಆಗಿದೆ. ಪರಾಕ್ರಮ ದೇಹಬಲ ಹಾಗೂ ಬಾಹುಬಲಗಳಿಂದ ಉಂಟಾಗತಕ್ಕದ್ದು. ಬಹುಶಃ ಇದಕ್ಕೆ ಪರಾಕ್ರಮವೇ ಮೌಲ್ಯವಾಗಿದ್ದ ವೀರಯುಗದ ಕಾಲಘಟ್ಟದಲ್ಲಿ ಪಂಪ ಇದ್ದದ್ದೆà ಕಾರಣ. ಆದರೆ ಅವನು ಹೇಳುವ ಉಳಿದ ಪಾತ್ರಗಳ ಮೌಲ್ಯಗಳಾದ ಅಭಿಮಾನ, ಸತ್ಯಸಂಧತೆ, ಉನ್ನತ ವ್ಯಕ್ತಿತ್ವ ಹಾಗೂ ಧಾರ್ಮಿಕತೆ ಎನ್ನುವ ಮೌಲ್ಯಗಳು ಹೃದಯವಂತಿಕೆ, ನಡೆವಳಿಕೆಗಳ ಮೂಲಕ ಪಡೆದುಕೊಳ್ಳುವ ಮೌಲ್ಯಗಳಾಗಿವೆ. ಬಹುಶಃ ಪಂಪನನ್ನು ಹೃದಯವಂತಿಕೆಯ ಪಾತ್ರಗಳು ಕಲಕಿದಂತೆ ಪರಾಕ್ರಮದ ಪಾತ್ರಗಳು ಕಲಕಿಲ್ಲ.
ಮುಂದಿನ ಪ್ರಶ್ನೆ ಭಾರತಂ ಲೋಕಪೂಜ್ಯಂ ಎನ್ನುವ ಪದಪುಂಜಕ್ಕೆ ಸಂಬಂಧಿಸಿದುದು. ಒಟ್ಟಾರೆ ಇಲ್ಲಿ ಎರಡು ರೀತಿಯ ಅರ್ಥಗ್ರಹಿಕೆಗಳ ಸಾಧ್ಯತೆಯಿದೆ. ಆಯಾ ಮೌಲ್ಯಗಳಿಗೆ ಸಂಕೇತಗಳಾದ ಆ ಎಂಟು ಪಾತ್ರಗಳಿಂದ ಮಹಾಭಾರತ ಎನ್ನುವ ಹೆಸರಿನ ಮಹಾಕಾವ್ಯವು ಜಗದ್ವಂದ್ಯವಾಗಿದೆ ಎನ್ನುವುದು ಒಂದು ಅರ್ಥ. ಅಭಿಮಾನ, ಸತ್ಯಸಂಧತೆ, ಉನ್ನತ ವ್ಯಕ್ತಿತ್ವ, ಧಾರ್ಮಿಕತೆ ಹಾಗೂ ಪರಾಕ್ರಮ ಮುಂತಾದ ಮೌಲ್ಯಗಳನ್ನು ಮೈಗೂಡಿಸಿಕೊಂಡು ಜೀವಿಸುತ್ತಿರುವ ಅಂತಹ ವ್ಯಕ್ತಿಗಳಿಂದ ಭಾರತ ದೇಶವು ಲೋಕಪೂಜ್ಯವಾಗಿದೆ ಎನ್ನುವುದು ಇನ್ನೊಂದು ಅರ್ಥಸಾಧ್ಯತೆ.
ಇಲ್ಲಿ ಭಾರತ ಎಂದರೆ ‘ಜಯ’ ಎನ್ನುವ ಹೆಸರಿನ ಮಹಾಭಾರತ ಎನ್ನುವ ಮಹಾಕಾವ್ಯ ಮತ್ತು ಭೌಗೋಳಿಕ ವಿಸ್ತಾರ ಪ್ರದೇಶದ ದೇಶವಾದ ಭಾರತ ಎನ್ನುವ ರಾಷ್ಟç ಎಂಬ ಪರಿಕಲ್ಪನೆ ಕವಿ ಪಂಪನಿಗಿದ್ದಂತಿದೆ. ನಮ್ಮ ದೇಶಕ್ಕೆ ಭಾರತ ಎನ್ನುವ ಹೆಸರು ಬರುವುದಕ್ಕೆ ಕಾರಣ ಇದೇ ಮಹಾಭಾರತ ಕೃತಿಯ ಶಕುಂತಲೋಪಾಖ್ಯಾನದಲ್ಲಿ ಬರುವ ದುಷ್ಯಂತ ಶಕುಂತಲೆಯ ಪುತ್ರನಾದ ಭರತನ ಪಾತ್ರ. ಈ ಅಂಶವು ಭಾರತ ದೇಶ ಎನ್ನುವ ಅರ್ಥಗ್ರಹಿಕೆಗೆ ಪುಷ್ಠಿಯನ್ನು ನೀಡುತ್ತದೆ. ದುಷ್ಯಂತ ಶಕುಂತಲೆಯ ಪುತ್ರ ಭರತನ ಹೆಸರು ಈ ದೇಶಕ್ಕಿದೆ ಎನ್ನುವ ಅಂಶದ ಹಿನ್ನೆಲೆಯಲ್ಲಿ ಈ ಪದ್ಯದಲ್ಲಿ ಕವಿ ಬಳಸಿರುವ – ಇನತನಯ, ಸಿಂಧೂದ್ಭವ, ಕುಂಭೋದ್ಭವ, ಧರ್ಮಪುತ್ರ – ಈ ಪ್ರಯೋಗಗಳನ್ನು ಗಮನಿಸಿ. ಜೈನಕವಿಯಾದ ಅವನು ಭಾರತ ದೇಶದ ಬಗ್ಗೆ ತನ್ನ ಸಮಗ್ರ ನಿಷ್ಠೆಯನ್ನು ಇಲ್ಲಿ ವ್ಯಕ್ತಪಡಿಸಿದ್ದಾನೆ. ಇದು ಭಾರತ ಬಹುಸಂಸ್ಕೃತಿಗಳುಳ್ಳ ಬಹುತ್ವದ ರಾಷ್ಟç ಎನ್ನುವುದಕ್ಕೆ ನಿದರ್ಶನವಾಗಿದೆ.
ಈ ಸಂದರ್ಭದಲ್ಲಿ ಕನ್ನಡದ ಇನ್ನೊಬ್ಬ ಶ್ರೆÃಷ್ಠ ಕವಿ ಕುಮಾರವ್ಯಾಸನು ತನ್ನ ಕೃತಿಗೆ ನೀಡಿರುವ ಹೆಸರನ್ನು ಗಮನಿಸೋಣ – ಕರ್ಣಾಟ ಭಾರತ ಕಥಾಮಂಜರೀ. ಇಲ್ಲಿ “ಕರ್ಣಾಟ” ಎಂದರೆ “ಕರ್ನಾಟಕ”À ಎನ್ನುವ ಭೌಗೋಳಿಕ ಪ್ರದೇಶ, ಕನ್ನಡ ಭಾಷೆ. ಹಾಗೆಯೇ ಭಾರತ ಎಂದರೆ ಭಾರತ ದೇಶ, ವ್ಯಾಸರ ಮಹಾಭಾರತ ಮತ್ತು ಸಂಸ್ಕೃತ. ಹೀಗಾಗಿ “ಕರ್ಣಾಟ ಭಾರತ ಕಥಾಮಂಜರಿ” ಎಂದರೆ ಕನ್ನಡ ಸಂಸ್ಕೃತಗಳ ಮುಖಾಮುಖಿ, ಕರ್ನಾಟಕ ಹಾಗೂ ಭಾರತಗಳ ಮುಖಾಮುಖಿ, ಕುಮಾರವ್ಯಾಸ ಹಾಗೂ ವೇದವ್ಯಾಸರ ಮುಖಾಮುಖಿ. ಈ ಅಂಶವು ಪಂಪನ ವಿಶಿಷ್ಟ ಪ್ರಯೋಗವಾದ ‘ಭಾರತಂ ಲೋಕಪೂಜ್ಯಂ’ ಎನ್ನುವುದರ ಅರ್ಥಗ್ರಹಿಕೆಗಳ ಸಾಧ್ಯತೆಗಳಿಗೆ ಪೋಷಕವಾಗಿ ಬಂದಿದೆ ಎನ್ನುವುದನ್ನು ಗಮನಿಸಬಹುದು.
ಇನ್ನು ಕೆಲವು ತಾಂತ್ರಿಕ ವಿಚಾರಗಳ ಸೂಕ್ಷö್ಮಗಳನ್ನು ಗಮನಿಸಿ: ೧. ಇಲ್ಲಿ ಮೊದಲು ದುರ್ಯೋಧನನ ಪಾತ್ರದ ಪ್ರಸ್ತಾಪ ಹಾಗೂ ಕೊನೆಯಲ್ಲಿ ಧರ್ಮಪುತ್ರನ ಪಾತ್ರದ ಪ್ರಸ್ತಾಪ ಬಂದಿದೆ. ೨. ಆರು ಪಾತ್ರಗಳು ಕ್ಷತ್ರಿಯರು, ಒಂದು ಬ್ರಾಹ್ಮಣ ಪಾತ್ರ ಹಾಗು ಒಂದು ಸೂತನೆಂಬ ಭ್ರಮೆಯ ಕ್ಷತ್ರಿಯ ಪಾತ್ರ. ೩. ನನ್ನಿ ಎಂದರೆ ಸತ್ಯ ಎಂಬ ಮೌಲ್ಯ. ಸತ್ಯ ಜೈನಧರ್ಮದ ಪಂಚಾಣುವ್ರತಗಳಲ್ಲಿ ಒಂದು.
ಈ ಪದ್ಯವು “ವಿಕ್ರಮಾರ್ಜುನ ವಿಜಯಂ” ಕಾವ್ಯದ ಕೊನೆಯಲ್ಲಿ ಬರುತ್ತದೆ. ಇಡೀ ಸಮಸ್ತಭಾರತವನ್ನು ಓದಿದ ನಂತರ ಪಂಪ ಓದುಗರಿಗೆ ಈ ಪದ್ಯವನ್ನು ಕುರಿತ ತನ್ನ ಅಭಿಪ್ರಾಯವನ್ನು ಕೂಲಂಕóಷವಾಗಿ ಚಿಂತನ-ಮಂಥನ ಮಾಡಲು ಅವಕಾಶ ನೀಡಿದ್ದಾನೆ.
# ಕೆ. ಎಸ್. ಮಧುಸೂದನ
***

Source – Sakhigeetha.com

ಕೋಟ್ಯಧೀಶರ ನಾಯಕತ್ವ ಬೇಕೆ….? – ಲಕ್ಷ್ಮಣ ಕೊಡಸೆ

0

ರಾಷ್ಟç ಈ ಏಳುದಶಕಗಳಲ್ಲಿ ನಿಜವಾಗಿ ಸಾಧಿಸಿದ್ದೆÃನು? ಎಂಬ ಪ್ರಶ್ನೆಗೆ ಯಾವ ಜನಪ್ರತಿನಿಧಿಯ ಬಳಿಯೂ ಸರಿಯಾದ ಉತ್ತರವಿಲ್ಲ. ಹೀಗಿರುವಾಗ ಸಮಸ್ಯೆಗಳು ಸಮಸ್ಯೆಗಳಾಗೇ ಉಳಿದದ್ದು ಹೆಚ್ಚು.

ಬಡತನ ಪೂರ ನಿರ್ಮೂಲನೆ ಆಗಿಲ್ಲ! ಅನಕ್ಷರಸ್ಥರು ಇನ್ನೂ ನಮ್ಮಲ್ಲಿ ಇದ್ದಾರೆ, ಮೂಢ ನಂಬಿಕೆಗಳು ಮತ್ತಷ್ಟು ಹೆಚ್ಚಾಗಿವೆ. ಅಪೌಷ್ಟಿಕತೆಯಿಂದ ಬಳಲುವವರಿಗೆ ಪರಿಹಾರಗಳಿಲ್ಲ.
ಹೀಗಿರುವಾಗ ಮತ್ತೆ ಚುನಾವಣೆ ಬಂದಿದೆ. ಇದೊಂದು ಹೇರಳ ಹಣ ಹೂಡಿ, ಗೆದ್ದು, ಅಧಿಕಾರಕ್ಕೆ ಬಂದು ಅದರ ದುಪ್ಪಟ್ಟು ಹಣ ಪಡೆವ ಆಟ!
ಇಂಥ ಕುತ್ಸಿತ ವ್ಯವಸ್ಥೆಯಲ್ಲಿ ಭಾರತ ತೊಳಲುತ್ತಿದೆ. ಇದರ ಬೇರುಗಳು ಎಲ್ಲಿವೆ? ಎಂಬ ಹುಡುಕಾಟದ ಪ್ರಯತ್ನ ಈ ಲೇಖನ…
ಸ್ವಾತಂತ್ರö್ಯ ಹೋರಾಟ ಕಾಲ ತೀವ್ರಗೊಂಡಿದ್ದ ಕಾಲದಲ್ಲಿಯೇ ಸ್ಥಳೀಯ ಸಂಸ್ಥಾನಗಳಲ್ಲಿ ಚುನಾವಣೆಗಳಲ್ಲಿ ಗೆದ್ದು ಆಡಳಿತ ನಡೆಸುವ ಅವಕಾಶ ನಮ್ಮ ನಾಯಕರಿಗೆ ಇತ್ತು. ಮಂತ್ರಿ ಪದವಿಗಳನ್ನು ಅಲಂಕರಿಸಿ ನಡೆಸುತ್ತಿದ್ದ ಆಡಳಿತ ವೈಖರಿಯನ್ನು ಸ್ವಾತಂತ್ರö್ಯ ಹೋರಾಟವನ್ನು ಮುನ್ನಡೆಸುತ್ತಿದ್ದ ಮಹಾತ್ಮ ಗಾಂಧಿಯವರು ನೋಡಿ ತಮ್ಮದೇ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ಹರಿಜನ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ೧೯೩೯ರ ಒಂದು ಸಂಚಿಕೆಯಲ್ಲಿ ಮಹಾತ್ಮರು ಬರೆದ ಒಂದು ಸಂಪಾದಕೀಯದಲ್ಲಿ ಈ ಮಾತುಗಳಿವೆ: `ನಮ್ಮ ನಾಯಕರು ಜನರ ವಿಶ್ವಾಸ ಗಳಿಸಿ ಆಡಳಿತ ನಡೆಸುವ ಅವಕಾಶ ಪಡೆದಿರುವುದು ಸರಿಯೇ. ಅವರ ನಿತ್ಯ ಜೀವನ ಸರಳವಾಗಿದ್ದು ಉಳಿದವರಿಗೆ ಮಾದರಿಯಾಗಬೇಕು. ಆಡಳಿತದಲ್ಲಿ ದುಂದುವೆಚ್ಚವನ್ನು ನಿಲ್ಲಿಸಬೇಕು.
ನಮ್ಮ ಮಂತ್ರಿಗಳಿಗೆ ಬ್ರಿಟಿಷ್ ಅಧಿಕಾರಿಗಳ ಜೀವನ ವಿಧಾನ ಮಾದರಿಯಲ್ಲ. ಹೊತ್ತುಹೊತ್ತಿನ ಕೂಳಿಗೆ ಪರಿತಪಿಸುವ ಕೋಟ್ಯಂತರ ದೇಶವಾಸಿಗಳು ತುಂಬಿರುವ ನಮ್ಮ ದೇಶದಲ್ಲಿ ನಾಯಕರು ಸರಳ ಜೀವನ ನಡೆಸಬೇಕು ಮತ್ತು ಅವರ ಜೀವನಮಟ್ಟ ಸುಧಾರಣೆಗೆ ಅವಶ್ಯಕವಾದ ವಿಧಾಯಕ ಕ್ರಮಗಳನ್ನು ಕೈಗೊಳ್ಳಬೇಕು..’
ಗಾಂಧೀಜಿ ಅವರಿಗೆ ಸಾರ್ವಜನಿಕ ಬದುಕು ಎಂಬುದು ತೆರೆದ ಪುಸ್ತಕ ಇದ್ದಂತೆ. ಸಾರ್ವಜನಿಕ ಸೇವೆಗೆ ಬರುವ ವ್ಯಕ್ತಿ ಸ್ವಂತದ್ದೆಲ್ಲವನ್ನೂ ದೇಶಕ್ಕಾಗಿ ತ್ಯಾಗ ಮಾಡಿ ದೇಶವಾಸಿಗಳ ಒಳಿತಿಗಾಗಿ ಅಹರ್ನಿಶಿ ಶ್ರಮಿಸುವ ಜನಸೇವಕನಾಗಬೇಕು ಎಂಬುದು ಅವರ ಆದರ್ಶವಾಗಿತ್ತು.
ಈ ಆದರ್ಶಗಳು ಸ್ವಾತಂತ್ರö್ಯಪೂರ್ವದಲ್ಲಿಯೇ ಆಚರಣೆಗೆ ಬರಲಿಲ್ಲ ಎಂಬುದು ಸ್ವತಃ ಗಾಂಧೀಜಿಯವರ ಅನುಭವಕ್ಕೆ ಬಂದಿತ್ತು. ಆದ್ದರಿಂದಲೇ ಅವರು ಸ್ವಾತಂತ್ರö್ಯ ಗಳಿಸಿದ ನಂತರ ಅದಕ್ಕಾಗಿ ಹೋರಾಟ ನಡೆಸಿದ ರಾಜಕೀಯ ಸಂಘಟನೆಗಳು ವಿಸರ್ಜನೆಯಾಗಬೇಕು. ಹೋರಾಟ ನಡೆಸಿದ ಕಾರಣಕ್ಕಾಗಿ ಅಧಿಕಾರ ನಡೆಸುವ ಅವಕಾಶ ಪಡೆಯುವುದಕ್ಕಿಂತ ಜನರ ಸಮಸ್ಯೆಗಳನ್ನು ಬಗೆಹರಿಸುವ ಸೇವಕರಂತೆ ಜನತೆ ಸಾರ್ವಜನಿಕ ಜೀವನಕ್ಕೆ ಬರಬೇಕು ಎಂಬುದನ್ನು ಅವರು ಪ್ರತಿಪಾದಿಸುತ್ತಿದ್ದರು.
ಸ್ವಾತಂತ್ರö್ಯ ಗಳಿಸಿದ ಈ ಏಳು ದಶಕಗಳಲ್ಲಿ ಗಾಂಧೀಜಿ ಅವರನ್ನು “ರಾಷ್ಟçಪಿತ” ಎಂದು ಗೌರವಿಸುತ್ತಾ, ಅವರ ಜನ್ಮದಿನ ಮತ್ತು ಪುಣ್ಯತಿಥಿಯನ್ನು ಆಚರಿಸುವ ಸಂದರ್ಭದಲ್ಲಿ ನೆನೆಸಿಕೊಳ್ಳುವ ಸಂಪ್ರದಾಯಕ್ಕೆ ದೇಶ ಬಂದು ಮುಟ್ಟಿದೆ. ದೇಶಕ್ಕಾಗಿ ಸ್ವಂತದ್ದೆಲ್ಲವನ್ನೂ ತ್ಯಾಗ ಮಾಡಿದ್ದ ಪೀಳಿಗೆ ಇತಿಹಾಸದ ಭಾಗವಾಗಿದೆ.
ಈಗ ಏನಿದ್ದರೂ ಐದು ವರ್ಷಕ್ಕೊಮ್ಮೆ ಜನಾದೇಶ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯುವ ವ್ಯವಸ್ಥೆ. ಜಾತ್ಯತೀತ ಸಮಾಜ ನಿರ್ಮಾಣ ಎಂಬುದು ಸಂವಿಧಾನದ ಆಶಯವಾಗಿದ್ದರೂ,
ಜಾತಿ ವ್ಯವಸ್ಥೆಯನ್ನು ಮತಾಧಿಕಾರ ಪಡೆಯುವ ಒಂದು ಸುರಕ್ಷಿತ ವ್ಯವಸ್ಥೆಯನ್ನಾಗಿ ಉಳಿಸಿಕೊಳ್ಳುವುದರಲ್ಲಿ ಜನನಾಯಕರ ಆಸಕ್ತಿ ಉಳಿದಿದೆ. ಇದನ್ನೆÃ ಎಲ್ಲ ರಾಜಕೀಯ ಪಕ್ಷಗಳೂ ವ್ಯವಸ್ಥಿತವಾಗಿ ರಕ್ಷಿಸಿಕೊಂಡು ಬಂದಿವೆ. ಚುನಾವಣೆಯಲ್ಲಿ ಗೆಲುವು ಸಾಧಿಸುವುದೇ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವ ಏಕೈಕ ಮಾರ್ಗವಾಗಿರುವುದರಿಂದ ಗೆಲ್ಲುವುದಕ್ಕಾಗಿ ಅನುಸರಿಸುವ ಯಾವ ತಂತ್ರವೂ ಆಧುನಿಕ ರಾಜಕೀಯ ಸಿದ್ಧಾಂತದಲ್ಲಿ ಒಪ್ಪಿತ ಮಾರ್ಗವೇ ಆಗಿದೆ.
ಆದ್ದರಿಂದಲೇ ಚುನಾವಣೆಯಲ್ಲಿ ಅಪಾರ ಪ್ರಮಾಣದಲ್ಲಿ ಹಣ ಚೆಲ್ಲಬಲ್ಲ ಕೋಟ್ಯಧೀಶರನ್ನೆÃ ಎಲ್ಲಾ ರಾಜಕೀಯ ಪಕ್ಷಗಳೂ ನಿಲ್ಲಿಸಿವೆ. ಚುನಾವಣಾ ಆಯೋಗ ಪ್ರತಿ ಅಭ್ಯರ್ಥಿಯ ವೆಚ್ಚದ ಮಿತಿಯನ್ನು ನಿಗದಿ ಪಡಿಸಿದ್ದರೂ ಅದನ್ನು ನಿರ್ವಹಿಸಬಲ್ಲ ಪ್ರತಿಭೆ ರಾಜಕೀಯ ಪಕ್ಷಗಳಿಗೂ ಮುಖಂಡರಿಗೂ ಇರುವುದು ಈ ವರೆಗಿನ ಎಲ್ಲಾ ಚುನಾವಣೆಗಳಲ್ಲಿಯೂ ಸಾಬೀತಾಗಿದೆ. ಗ್ರಾಮಪಂಚಾಯತ್ ಹಂತದ ಚುನಾವಣೆಯಲ್ಲಿಯೇ ಒಬ್ಬ ಅಭ್ಯರ್ಥಿ ಲಕ್ಷಗಟ್ಟಲೆ ವೆಚ್ಚ ಮಾಡುವಂಥ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಕೊಂಡಿರುವ ನಾಡಿನ ರಾಜಕೀಯ ಪಕ್ಷಗಳಿಗೆ ಯಾವುದೇ ಕಾನೂನಾತ್ಮಕ ನಿರ್ಬಂಧಗಳ ಚೌಕಟ್ಟಿನಲ್ಲಿಯೇ ಮತದಾರರನ್ನು ಪ್ರಭಾವಿಸುವ ತಂತ್ರಗಾರಿಕೆ ಸಿದ್ಧಿಸಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆಯನ್ನು ಜನತಂತ್ರದ ಹಬ್ಬವೆಂದು ಬಣ್ಣಿಸುವ ಮಾಧ್ಯಮಗಳಿವೆ. ಇದನ್ನು ರಣರಂಗ, ಕುರುಕ್ಷೆÃತ್ರ ಎಂದು ಪ್ರಚೋದಿಸುವ ಅಬ್ಬರವೂ ಕಾಣುತ್ತಿದೆ. ಆದರೆ ಸ್ವಾತಂತ್ರö್ಯ ಗಳಿಸಿದ ಏಳು ದಶಕಗಳ ನಂತರವೂ ದೇಶದಲ್ಲಿ ಬಡತನ, ಅನಕ್ಷರತೆ, ಅಪೌಷ್ಟಿಕತೆ, ಮೂಢನಂಬಿಕೆಗಳನ್ನು ನಿವಾರಿಸಲು ಸಾಧ್ಯವಾಗಿಲ್ಲ.
ನಿರುದ್ಯೊÃಗದ ಬವಣೆ ತೀವ್ರವಾಗಿದೆ. ಜೀವನಾವಶ್ಯಕ ಮೂಲಸೌಕರ್ಯಗಳ ಕೊರತೆ ನಿವಾರಣೆ ಆಗಿಲ್ಲ. ಈ ಸಮಸ್ಯೆಗಳನ್ನು ತಳಹಂತದಲ್ಲಿಯೇ ತಿಳಿದು ಅಧಿಕಾರಶಾಹಿಯನ್ನು ಮಣಿಸಿ ಅಗತ್ಯವಿರುವ ಸುಧಾರಣೆಗಳನ್ನು ಕೈಗೊಳ್ಳುವುದಕ್ಕೆ ನಿಸ್ವಾರ್ಥದಿಂದ ಶ್ರಮಿಸಬಲ್ಲ ಜನಪ್ರತಿನಿಧಿಗಳು ಬೇಕಾಗಿದ್ದಾರೆ.
ಚುನಾವಣೆಯಲ್ಲಿ ಹಣ ಹೂಡಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುವ ಕೋಟ್ಯಧೀಶರಿಗೆ ರಾಜಕೀಯ ಅಧಿಕಾರ. ಅವರ ವ್ಯಾಪಾರ ವಹಿವಾಟುಗಳನ್ನು ವಿಸ್ತರಿಸಿಕೊಳ್ಳುವ ಅಪರಿಮಿತ ಅವಕಾಶವನ್ನು ಸೃಷ್ಟಿಸುತ್ತದೆ ಎಂಬುದನ್ನು ಬಡಜನತೆ ಅರ್ಥ ಮಾಡಿಕೊಳ್ಳದಿದ್ದರೆ ನಾಡಿನ ಮೂಲ ಸಮಸ್ಯೆಗಳು ಹಾಗೆಯೇ ಉಳಿಯುತ್ತವೆ.
ಕೋಟ್ಯಧೀಶರಿಂದ ಬಡಜನರ ಸಮಸ್ಯೆಗಳು ಪರಿಹಾರ ಕಾಣುವುದಿಲ್ಲ ಎಂಬ ಸತ್ಯವನ್ನು ಜನತೆ ತಿಳಿಯಬೇಕು. ತಮ್ಮ ಸಮಸ್ಯೆಗಳನ್ನು ಸ್ಥಳೀಯ, ಪ್ರಾಮಾಣಿಕ, ಸೇವಾದೃಷ್ಟಿಯ ವ್ಯಕ್ತಿಗಳಿಂದ ಮಾತ್ರವೇ ನಿವಾರಿಸಿಕೊಳ್ಳಲು ಸಾಧ್ಯ ಎಂಬುದನ್ನು ಅರಿತು ಬೆಂಬಲಿಸಿದರೆ ಜನತಂತ್ರ ವ್ಯವಸ್ಥೆ ಅರ್ಥಪೂರ್ಣವಾಗಲು ಸಾಧ್ಯ.

Source – Sakhigeetha.com

ಕಂಡದ್ದೆಲ್ಲ ಆಹಾರವಲ್ಲ…..! – ಪ್ರಭಾ

0

ನಾವು ತಿನ್ನುವ ಆಹಾರ ರುಚಿಕರವಾಗಿರುತ್ತದೆ. ಆದರೆ ಅದೇ ಆಹಾರ ವಿಷವಾಗಿ ಕಾಡಬಹುದು. ಅದು ವಿಷ ಎನ್ನುವುದು ಕೂಡ ಗೊತ್ತೇ ಆಗದೆ ಸೇವಿಸುತ್ತೇವೆ. ಆಹಾರ ಸಂಬಂಧಿ ಕಾಯಿಲೆಯಾಗಿ ಕಾಡುವ ತನಕವು ನಾವು ಸೇವಿಸುವ ಆಹಾರದ ಬಗ್ಗೆ ಯೋಚಿಸುವುದೇ ಇಲ್ಲ ಉತ್ತಮ ಆಹಾರ ಸೇವನೆ ಆರೋಗ್ಯ ಕಾಪಾಡಲು ಬೇಕಾಗಿರುವ ಮೊದಲ ಆದ್ಯತೆ, ನಮ್ಮ ತಪ್ಪಿಲ್ಲದಿದ್ದರೂ ಇನ್ಯಾರದೋ ದುರುದ್ದೇಶಕ್ಕೆ ನಾವು ಸೇವಿಸುವ ಆಹಾರದಲ್ಲಿ ಕಲಬೆರಕೆಯಿಂದಾಗಿ ಆರೋಗ್ಯದ ಬದಲು ಅನಾರೋಗ್ಯ ನಮ್ಮನ್ನು ಕಾಡುತ್ತದೆ.
ಆಹಾರದ ಕಲಬೆರಕೆಯು ನಮ್ಮ ಆರೋಗ್ಯದ ಮೇಲೆ ಉಂಟುಮಾಡುವ ದುಷ್ಟರಿಣಾಮ ಅನೇಕ ವೇಳೆ ನಿಧಾನವಾಗಿ ಆವರಿಸುತ್ತದೆ. ಈ ಕಲಬೆರಕೆ ಆಹಾರ ಸೇವನೆಯಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ. ವ್ಯಕ್ತಿಯ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಮತ್ತು ತೂಕವನ್ನು ಹೆಚ್ಚಿಸುತ್ತದೆ. ಹಣದ ದುರಾಸೆಯಿಂದಾಗಿ ಕೃತಕವಾದ ಮತ್ತು ವಿಷಕಾರಕ ಬಣ್ಣವನ್ನು ಹಣ್ಣು, ತರಕಾರಿ, ¸ÉÆಪ್ಪುಗಳಿಗೆ ಮಿಶ್ರಮಾಡಿ ಮಾರಾಟ ಮಾಡುತ್ತಾರೆ.
ಅಷ್ಟೇ ಅ®èದೆ ಮರಳು, ಕಲ್ಲು ಇವುಗಳನ್ನು ಕಾಳು ಧಾನ್ಯಗಳಿಗೆ ಮಿಶ್ರ ಮಾಡಿ ಮಾರುತ್ತಾರೆ. 1k.g ರಾಗಿ ಕೊಂಡರೆ 1/4 k.g ಕಲ್ಲು ಇರುತ್ತದೆ. ವಿಧಿಯಿಲ್ಲದೆ ಕೊಂಡುಕೊಳ್ಳಲೇ ಬೇಕಾಗುತ್ತದೆ. ಪ್ಲಾಸ್ಟಿಕ್ ನಿಂದ ಹಲವಾರು ಆಹಾರ ಪದಾಥðಗಳನ್ನು ತಯಾರು ಮಾಡುತ್ತಾರೆ. ನಮ್ಮ ಹಿಂದಿನ ಜನರು ಅನ್ನವನ್ನು ಅಮೃತ ಎಂದು ತಿಳಿದು ಸೇವಿಸುತ್ತಿದ್ದರು . ಆದರೆ ಈಗ ಅನ್ನ ಮಾಡಿರುವುದು ಅಕ್ಕಿಯಿಂದಲೋ ಅಥð ಪ್ಲಾಸ್ಟಿಕ್¤ ಯಿಂದಲೋ ಎಂದು ಹುಡುಕಬೇಕಾಗಿದೆ.
ಮಕ್ಕಳಿಗೆ ಸಕ್ಕರೆ ಎಂದರೆ ಪಂಚಪ್ರಾಣ ಆದರೆ ಅದು ತುಂಬಾ ಕೆಮಿಕಲ್ ಯಿಂದ ಕೂಡಿರುತ್ತದೆ ಅದನ್ನು ತಿಂದರೆ ಕ್ಯಾನ್ಸರ್ ಬರುವ ಸಾಧ್ಯತೆಯಿರುತ್ತದೆ. ಜ್ಯೂಸ್ ಅಂಗಡಿಗಳಲ್ಲಿ ಕೊಳೆತ ಹಣ್ಣುಗಳಿಂದಲೂ ಜ್ಯೂಸ್ ತಯಾರಿಸಿ ಮಾರಬಹುದು ಅದು ನಮಗೆ ತಿಳಿಯುದಿಲ್ಲ ಆದ್ದರಿಂದ ಆದಷ್ಟೂ ಮನೆಯಲ್ಲಿಯೇ ಜ್ಯೂಸ್ ತಯಾರಿಸಿ ಕುಡಿಯುವುದು ಉತ್ತಮ. ¦eÁÓ, §gïUÀgï, PÉÃPïನಂತಹ ಬೇಕರಿ ತಿಂಡಿಗಳಿಂದ ಮೈ ತೂಕವನ್ನು ಹೆಚ್ಚಿಸಿಕೊಂಡು ಹಲವು ಜನರು ಪರದಾಡುತ್ತಿರುತ್ತಾರೆ. ನಮ್ಮಲ್ಲಿರುವ ಹಣವನ್ನು ಅವರಿಗೆ ಕೊಟ್ಟು ನಾವು ಕಲುಷಿತ ಆಹಾರವನ್ನು ಕೊಂಡುಕೊಳ್ಳುತ್ತೇವೆ ಅಂದರೆ ಹಣ ಕೊಟ್ಟು ರೋಗವನ್ನು ಕೊಂಡಂತೆ!
ಇನ್ನಾದರೂ ನಾವು ಹಣ ಕೊಟ್ಟು ಹೊರಗಡೆ ಕೆಮಿಕಲ್ ತಿನ್ನುವುದರ ಬದಲು ಮನೆಯಲ್ಲಿಯೇ ಶುದ್ಧವಾದ ಆರೋಗ್ಯವಾದ ಆಹಾರವನ್ನು ತಿನ್ನುವುದನ್ನು ರೂಢಿಮಾಡಿಕೊಳ್ಳಬೇಕು. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮನೆಯಲ್ಲಿಯೇ ಪೌಷ್ಟಿಕ ಆಹಾರ, ಮೊಳಕೆ ಕಾಳುಗಳನ್ನು ಕೊಡಬೇಕು. ಹೊರಗಡೆ ಸಿಗುವ ಬಣ್ಣಬಣ್ಣದ ಆಹಾರವನ್ನು ತ್ಯಜಿಸಿ ಮನೆಯಲ್ಲಿಯೇ ಸಿಗುವ ಬಣ್ಣರಹಿತ ಆಹಾರವನ್ನು ಸೇವಿಸಬೇಕು. ಹಾUÁದರೆ ಮಾತ್ರ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ.’

Source – Sakhigeetha.com

“ಹೆಣ್ಣು ಸಂಸಾರದ ಕಣ್ಣು” * ವಿಜಯಲಕ್ಷ್ಮಿ ಸತ್ಯ ಮೂರ್ತಿ

0

ಹೆಣ್ಣು ಮನೆಯ ದೀಪವಾಗಿ ಬೆಳಗುವ ಸಾಮರ್ಥ್ಯವನ್ನು ಉಳ್ಳವಳು. ತಾನು ಒಳಗೇ ನೊಂದರೂ ಯಾರಿಗೂ ನೋವಾಗದಂತೆ ನಗುನಗುತ್ತಾ ಎಲ್ಲರಿಗೂ ಪ್ರಿÃತಿಪಾತ್ರಳಾಗಿ ಸಂಸಾರವನ್ನು ಕಾಪಾಡುವ ಹೆಣ್ಣು ಒಂದು ವರವೆಂದರೆ ತಪ್ಪಾಗಲಾರದು.
ಇಂತ ಒಬ್ಬ ಹೆಣ್ಣು ತನ್ನ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ಮಡಿಯಾಳು ಅನ್ನುವುದೇ ಒಂದು ಪ್ರಶ್ನೆ. ಆದರೆ ಅವಳಿಗೆ ಈ ಪ್ರಶ್ನೆ ಕಾಡುವುದೇ ಇಲ್ಲ. ಯಾಕೆಂದರೆ ಅವಳ ಮನಸೆಲ್ಲಾ ತನ್ನ ಮನೆ ಸಂಸಾರ, ಗಂಡ, ಮಕ್ಕಳು, ಅತ್ತೆ, ಮಾವ ಹೀಗೆ ಈ ಬಂಧನಗಳಲ್ಲೆÃ ಮುಳುಗಿಹೋಗುತ್ತದೆ. ತನ್ನ ಬಗ್ಗೆ ಯೋಚಿಸಲು ಸಮಯವೇ ಇಲ್ಲ ಅವಳಿಗೆ. ಅಂತೆಯೇ ಎಷ್ಟು ಜನ ಹೆಂಡತಿ / ತಾಯಿಯ ಬಗ್ಗೆ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ? ತುಂಬಾ ಅಪರೂಪ ಇದು. ಆದರೆ ಒಬ್ಬ ಹೆಣ್ಣಿನ ಆರೋಗ್ಯಯದ ಬಗ್ಗೆ ನಿಗಾ ವಹಿಸುವುದೂ ಅಷ್ಟೆÃ ಮುಖ್ಯ. ಯಾಕೆಂದರೆ ಅವರ ಆರೋದ್ಯ ಸರಿ ಇದ್ದಾಗ ತಾನೆ ಆಕೆ ಎಲ್ಲರನ್ನೂ ನೋಡಿಕೊಳ್ಳಲು ಸಾಧ್ಯ ?
ಅವಳು ಎಷ್ಟೊÃ ಸಂಗತಿಗಳನ್ನು ಮರೆ ಮಾಚುತ್ತಾಳೆ ತನ್ನವರ ಹಿತದೃಷ್ಟಿಯಿಂದ. ಆದರೆ ಗಂಡಸು ಸಹ ಅದನ್ನು ಅರಿತು ಅವಳಿಗೆ ಸಹಾಯ ಮಾಡುತ್ತಾ ಸದಾ ಅವಳ ಆರೋಗ್ಯದ ಕಡೆ ನಿಗಾ ವಹಿಸಬೇಕು.
ಹೆಣ್ಣು ಬಹಳ ಸೂಕ್ಷö್ಮ ಅವಳು ಮನೆಯ ಎಲ್ಲರನ್ನೂ ಅಂಗೈಯಲ್ಲಿಟ್ಟುಕೊಂಡು ಸಲಹುತ್ತಾಳೆ. ಪೋಷಿಸುತ್ತಾಳೆ. ಅವಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮನೆಯವರೆಲ್ಲರ ಧರ್ಮ ಹಾಗೂ ಜವಬ್ದಾರಿ.
ನಲವತ್ತರ ನಂತರ ಹೆಣ್ಣಿನಲ್ಲಿ ಆಗುವ ಕೆಲವು ಸುಸ್ತು, ನಿಶ್ಯಕ್ತಿ ಅವಳನ್ನು ಮಾನಸಿಕವಾಗಿ ಕುಗ್ಗಿಸುತ್ತದೆ. ಈ ಸಮಯದಲ್ಲಿ ಮಾನಸಿಕವಾಗಿ ಬಲಗೊಳಿಸಲು ಮನೆಯವರೆಲ್ಲರ ಸಹಕಾರ ಬಹುಮುಖ್ಯ. ಅನಾವಶ್ಯಕವಾಗಿ ಆಕೆಯ ಮೇಲೆ ರೇಗುವುದು, ಕೋಪಿಸಿಕೊಳ್ಳುವುದು ಇವುಗಳು ಸಲ್ಲದ. ಹೆಣ್ಣು ತನ್ನದೇ ಆದ ಒಂದು ಲಕ್ಷö್ಮಣ ರೇಖೆಯನ್ನು ಹಾಕಿಕೊಂಡಿರುತ್ತಾಳೆ. ವ್ಯಾವಹಾರಿಕವಾಗಿ ತಿಳುವಳಿಕೆ ಇಲ್ಲದಿದ್ದರೂ ಸಹ ತನ್ನ ಆರೋಗ್ಯದ ಬಗ್ಗೆ ಚಿಂತಿಸುವುದಿಲ್ಲ. ಅವಳ ಆರೋಗ್ಯದ ಸಲುವಾಗಿ ವೆಚ್ಚ ಮಾಡುವ ಹಣ ಮನೆಯ ಇತರ ಅತ್ಯಗತ್ಯಗಳಿಗೆ ಬೇಕಾದೀತು ಎಂಬ ಮುಂದಾಲೋಚನೆಯೊಂದ.
ಹಾಗಾಗಿ ಆಕೆಯ ಸ್ವಸ್ಥö್ಯಕ್ಕಾಗಿ ಆರು ತಿಂಗಳಿಗೊಮ್ಮೆಯಾದರೂ ಬಲವಂತವಾಗಿ ವೈದ್ಯಕೀಯ ತಪಾಸಣೆ ಮಾಡಿರುವುದು ಬಹಳ ಮುಖ್ಯ. ಆಕೆ ಬಹುಕಾಲ ಮನೆಮಂದಿಯೊಡನೆ ನಗುತ್ತ ಬಾಳಲು ಅವಕಾಶ ಮಾಡಿಕೊಡುವ ಜವಬ್ದಾರಿ ಮನೆಯವರೇ ವಹಿಸಿಕೊಂಡರೆ ಅವಳಿಗಿಂತ ಸಂಭ್ರಮಿಸುವವರುಂಟೇ? ಮಕ್ಕಳಿಗೂ ಸಹ ಈ ನಿಟ್ಟಿನಲ್ಲಿ ಅರಿವು ಮಾಡಿಸುವುದು ಸಹ ಅಷ್ಟೆÃ ಮುಖ್ಯ. ಆ ಸಂಸಾರವನ್ನು ರೂಢಿಸುವುದು ಹೆತ್ತವರ ಕರ್ತವ್ಯವೇ ಆಗಿದೆ. ತನ್ನವರಿಗಾಗಿ ಎಷ್ಟೆಲ್ಲಾ ಕಸರತ್ತು ಮಾಡುವ ಹೆಣ್ಣಿಗೆ ಅವಳು ಬಯಸುವ ಒಂದಿಷ್ಟು ಪ್ರಿÃತಿ ಅಕ್ಕರೆಯನ್ನು ಕೊಟ್ಟು ಮಾನಸಿಕವಾಗಿ ದೈಹಿಕವಾಗಿ ಅವಳನ್ನು ಬಲವಂತಳನ್ನಾಗಿ ಮಾಡಲು ಚೌಕಾಸಿಯಾದರೂ ಏಕೆ ? ಅವಳ ನಗು ಮನೆಯವರೆಲ್ಲರ ಆರೋಗ್ಯವನ್ನು ಕಾಪಾಡಬಲ್ಲುದಾದರೆ ಅವಳ ಆರೋಗ್ಯವು ಸಹ ಅಷ್ಟೆÃ ಬೆಲೆಯುಳ್ಳದ್ದು ಅಲ್ಲವೇ ? ತನ್ನ ಮನೆಯೇ ಪ್ರಪಂಚ ತನ್ನವರೇ ಎಲ್ಲಾ ಅಷ್ಟೆöÊಶ್ವರ್ಯ ಎಂದು ಬದುಕುವುವಳ ಬಗ್ಗೆ ಕೊಂಚ ಪ್ರಿÃತಿ, ಆದರ, ಆಭಿಮಾನ ಹಾಗೇ ಅವಳ ಆರೋಗ್ಯ ಇವೆಲ್ಲವೂ ತನ್ನವರಿಂದ ಅವಳಿಎ ಸಿಕ್ಕಿದರೆ ಮನಸಾರೆ ಸುಖಿಸುತ್ತಾಳೆ. ಹಾರೈಸುತ್ತಾಳೆ ಸದಾ.

ಯತ್ರ ನಾರ್ಯಾಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ|
ಯತ್ರೆöÊತಾಸ್ತು ನ ಪೂಜ್ಯಂತೇ ತತ್ರಾಫಲಾಃ ಸರ್ವಾಃಕ್ರಿಯಾಃ||

ನಾರಿಯರು ಎಲ್ಲಿ ಗೌರವಿಸಲ್ಪಡುವರೋ ಅಲ್ಲಿ ದೇವತೆಗಳು ಸಂತುಷ್ಟರಾಗುತ್ತಾರೆ. ಎಲ್ಲಿ ಇವರು ಪೂಜಿಸಲ್ಪಡುವುದಿಲ್ಲವೋ, ಅಲ್ಲಿ ಎಲ್ಲಾ ಕೆಲಸಗಳೂ ಸಫಲವಾಗುವುದಿಲ್ಲ.
ಹಾಗಾಗಿ ತಾಯಿಯಾಗಿ, ಅಕ್ಕನಾಗಿ, ತಂಗಿಯಾಗಿ, ಅತ್ತಿಯಾಗಿ, ಮಡದಿಯಾಗಿ, ಎಲ್ಲಾ ಸಂದರ್ಭಗಳಲ್ಲಿಯೂ ಹೆಣ್ಣು ಗೌರವಾರ್ಹಳು. ಆಕೆಗೆ ನಮಿಸೋಣ.

Source – Sakhigeetha.com

ಹೆಮ್ಮೆಯ ಹೆಣ್ಣು, ಸಂಸಾರದ ಕಣ್ಣು ಹೆಣ್ಣೆಂಬ ಕೀಳರಿಮೆ ಬೇಡ.

0

ಸಮಾಜದಲ್ಲಿ ಗಂಡು ಮತ್ತು ಹೆಣ್ಣು ಇಬ್ಬರೂ ಸಮನಾಗಿ ದುಡಿಯುತ್ತಿದ್ದಾರೆ. ಆದರೂ ಹೆಣ್ಣನ್ನು ಕೀಳಾಗಿ ಕಾಣುತ್ತಾರೆ. ಆದರೆ ಒಂದು ಮನೆಯಲ್ಲಿ ಮಕ್ಕಳ ವಿದ್ಯಾಭ್ಯಾಸ ಮಾಡಿಸುವವಳೆ ಹೆಣ್ಣು. ಮಗು ತನ್ನ ಮೊದಲ ಶಿಕ್ಷಣವನ್ನು ತನ್ನ ತಾಯಿಯಿಂದ ಪಡೆಯುತ್ತದೆ. ಮಗುವಿನ ಶಿಕ್ಷಣ ತಾಯಿಯ ಗರ್ಭದಲ್ಲಿರುವಾಗಲೇ ರೂಪುಗೊಳ್ಳುತ್ತದೆ. ಒಬ್ಬ ಪುರುಷನಿಗೆ ಶಿಕ್ಷಣ ನೀಡಿದರೆ ಅದು ಅವನಿಗೆ ಮಾತ್ರ ಉಪಯೋಗವಾಗುತ್ತದೆ. ಅದೇ ಶಿಕ್ಷಣವನ್ನು ಒಬ್ಬ ಸ್ತಿçà ಪಡೆದರೆ ಇಡೀ ಕುಟುಂಬವೇ ಸುಸಂಸ್ಕೃತವಾಗುವುದರಲ್ಲಿ ಸಂದೇಹವಿಲ್ಲ. ಆರೋಗ್ಯಕರ ಮನೆ ವಾತಾವರಣಕ್ಕೆ ಮಹಿಳೆಯ ಪರಿಶ್ರಮ ಇದ್ದೆ ಇರುತ್ತದೆ. ಒಂದು ಹೆಣ್ಣು ಮದುವೆಯಾಗಿ ಬೇರೊಂದು ಮನೆಗೆ ಬರುವಾಗ ಹುಟ್ಟಿ ಬೆಳೆದ ಮನೆಯನ್ನು ತನ್ನವರನ್ನು ಬಿಟ್ಟು ತವರಿಗೆ ಒಳ್ಳೆಯದಾಗಲೆಂದು ಹರಸಿ ಗಂಡನ ಮನೆಗೆ ಬರುತ್ತಾಳೆ ಅಲ್ಲಿ ಅವರೆಲ್ಲ ಅಪರಿಚಿತರು ಎಲ್ಲಾ ಹೊಸದು ಆದರೂ ಅವಳು ಅವರಿಗೆಲ್ಲಾ ಹೊಂದಿಕೊಂದು ಕಷ್ಟ ಸುಖದಲಿ ಭಾಗಿಯಾಗುತ್ತಾಳೆ. ಗಂಡನ ಬೇಕು ಬೇಡಗಳನ್ನು ತಿಳಿದುಕೊಂಡು ಅತ್ತೆ, ಮಾವ, ಗಂಡ,,,,,
ಎಲ್ಲರನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ ಅದಕ್ಕೆ ದೊಡ್ಡವರು ಹೇಳಿರುವುದು “ಹೆಣ್ಣು ಸಂಸಾರದ ಕಣ್ಣು” ಎಂದು ಅಷ್ಟಕ್ಕೆ ಅವಳ ಜವಬ್ದಾರಿ ಮುಗಿಯಲಿಲ್ಲ ಮಗುವಿಗೆ ಜನ್ಮ ನೀಡುತ್ತಾಳೆ ಆ ಮಗು ಗಂಡಾದರು ಹೆಣ್ಣಾದರೂ ಸರಿ ಸಂತೋಷವಾಗಿ ಸ್ವಿÃಕರಿಸುತ್ತಾಳೆ. ಹೆಣ್ಣಿಗೆ ತಾಳ್ಮೆ, ಸಹನೆ, ಪ್ರಿÃತಿ, ದಯೆ, ಮಮಕಾರ ಗಂಡಿಗಿಂತ ಹೆಚ್ಚೆÃ ಇರುತ್ತದೆ ಇನ್ನೂ ಮಕ್ಕಳಾದ ಮೇಲೆ ಮಕ್ಕಳ ಲಾಲನೆ ಘೋಷಣೆ ವಿಧ್ಯಾಭ್ಯಾಸ ಇದೆಲ್ಲದರ ಜೊತೆಗೆ ಒಳ್ಳೆಯ ನಡತೆ ಎಲ್ಲವನ್ನು ಹೇಳಿಕೊಡಬೇಕಗುತ್ತದೆ ತಾಯಿಯೇ ಮೊದಲ ಗುರು ಎಂಬ ಮಾತಿನಂತೆ ಮನೆಯಲ್ಲಿ ಮಕ್ಕಳ ವಿಧ್ಯಾಭ್ಯಾಸದ ಕೆಲಸವನ್ನು ನಿರ್ವಹಿಸಬೇಕಗುತ್ತದೆ.
ಹೆಣ್ಣು ಸಂಸಾರದಲ್ಲಿ ಮಾತ್ರ ಸೀಮಿತವಾಗಿರದೇ ಎಲ್ಲಾ ರಂಗದಲ್ಲೂ ಮುಂದಿದ್ದಾಳೆ. ಯುದ್ದ, ಕ್ಷಾತ್ರವಿದ್ಯೆಗಳು, ರಾಜ್ಯಾಡಳಿತ, ಆತ್ಮಗೌರವ ಓರ್ವ ಆಡಳಿಗಾರರಿಗೆ ಇರಲೇಬೇಕಾದ ಗುಣಗಳು ಇವೆಲ್ಲ ಪುರುಷರ ಸೊತ್ತಲ್ಲ ಎಂದು ಶತಮಾನಗಳ ಹಿಂದೆಯೇ ನೂರಾರು ಸಾವಿರಾರು ಸ್ತಿçÃಯರು ಸಾಬೀತುಪಡಿಸಿÀದ್ದಾರೆ. ಕೆಲವೇ ಕೆಲವರು ಮಾತ್ರ ರಾಣಿಯರು ರಾಜಮಾತೆಯಾಗಿದ್ದರಿಂದ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದ್ದಾರೆ.
ಕತ್ತಿ ಹಿಡಿದು ದಿಟ್ಟತನದಿಂದ ಬ್ರಿÃಟಿಷರ ವಿರುದ್ದ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ ಝಾನ್ಸಿರಾಣಿ ಲಕ್ಷಿÃಬಾಯಿ, ಓಬವ್ವ, ರಾಣಿ ಅಬ್ಬಕ್ಕ, ಕೆಳದಿ ಚೆನ್ನಮ್ಮ ಇನ್ನೂ ರಾಜಕೀಯ ಕ್ಷೆÃತ್ರದಲ್ಲಿ ಭಾರತದ ಪ್ರಪ್ರಥಮ ಪ್ರಾಧಾನಿ ಇಂದಿರಾಗಾಂಧಿ, ಮೊದಲ ರಾಷ್ಟçಪತಿ ಪ್ರತಿಭಾ ಪಾಟೀಲ್, ಅನ್ನಿಬೆಸೆಂಟ್ ಕ್ರಿÃಡಾರಂಗದಲ್ಲಿ ಕರ್ಣಂ ಮಲ್ಲೆÃಶ್ವರಿ, ಪಿ.ಟಿ. ಉಷಾ, ಸೈನಾ ನೆಹ್ವಾಲ್, ಸಾನಿಯಾ ಮಿರ್ಜಾ, ಸಾಮಾಜಿಕ ಕ್ಷೆÃತ್ರದಲ್ಲಿ ಐ.ಪಿ.ಎಸ್. ಅಧಿಕಾರಿ ಕಿರಣ್ ಬೇಡಿ ಮದರ್ ತೆರೆಸಾ, ಮೇಂಡಂ ಕಾಮ, ವಿಜ್ಞಾನ ಕ್ಷೆÃತ್ರದಲ್ಲಿ ಪ್ರಪ್ರಥಮ ಮಹಿಳಾ ಗಗನಯಾತ್ರಿ ಕಲ್ಪನಾ ಚಾವ್ಲ, ಸುನೀತಾ ವಿಲಿಯಮ್ಸ, ಶರ್ಮಿಲಾ ಭಟ್ಟಾಚಾರ್ಯ ಅಷ್ಟೆÃ ಅಲ್ಲದೇ ಮಿಲಿಟರಿ ಕ್ಷೆÃತ್ರದಲ್ಲೂ ನಮ್ಮ ಹೆಣ್ಣು ಮಕ್ಕಳು ದೇಶ ಸೇವೆ ಮಾಡುತ್ತಿದ್ದಾರೆ. ಅವರಿಗೆ ನಮ್ಮದೊಂದು ನಮನ. ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಿದ್ದಾರೆ. ಹೆಣ್ಣನ್ನು ಪ್ರಕೃತಿಗೆ ಹೋಲಿಸುತ್ತಾರೆ. ಹೆಣ್ಣಿಗೆ ಅರ್ಪೂವಸ್ಥಾನ ಇದೆ. ಭಾರತಮಾತೆ ಕೂಡ ಒಂದು ಹೆಣ್ಣು. ಹಿಂದೂ ಸಂಸ್ಕೃತಿಯಲ್ಲಿ ಅಮ್ಮ, ಹೆಂಡತಿ, ಅಕ್ಕ, ತಂಗಿ ಎಲ್ಲಾರಿಗೂ ಸರ್ಪೋರ್ಟ್ ಮಾಡುತ್ತಾ ಬಂದಿದ್ದಾರೆ ಮತ್ತು ಅವರ ಯಶಸ್ಸಿಗೂ ಕಾರಣರಾಗಿದ್ದಾರೆ. “ಖesಠಿeಛಿಣ ತಿomeಟಿ”

ಕವಿ ವಾಣಿ
ನಮ್ಮನೆಲ್ಲಾ ಕಾಪಿಡುವ
ಅವನಿ ತಾಯಿ- ಹೆಣ್ಣು;
ಹೆತ್ತು ಹೊತ್ತು ಸಲಹುವ
ಅಕ್ಕರೆ ಅಮ್ಮ ಹೆಣ್ಣು!

ಹೆಣ್ಣಿರದ ಕ್ಷೆÃತ್ರವಿಲ್ಲ
ನಿಭಾಯಿಸದ ಕೆಲಸವಿಲ್ಲ-

ಎಲ್ಲ ದಾಖಲೆಗಳ ಮುರಿದವಳೂ
ಹೊಸ ಇತಿಹಾಸ ಬರೆದವಳೊ…
ನಮ್ಮ ನಡುವೆ ಇರುವ ಹೆಣ್ಣು!

ಹೂವಂತೆ ಕೋಮಲ, ನಿಜ
ವಜ್ರದಂತೆ ಕಠಿಣವೂ ಸಹಜ.
ಮನೆ, ಊರು, ರಾಷ್ಟç ಕಟ್ಟಬಲ್ಲವಳು
ಮನಸ್ಸು ಮಾಡಿದರೆ ಕೆಡವಬಲ್ಲವಳು!

ಹೆಣ್ಣಿಗೆ ಹೆಣ್ಣೆÃ ಶತ್ರು!
ಹೆಣ್ಣಿಗೆ ಹೆಣ್ಣೆÃ ಸರಿಸಾಟಿ.

Source – Sakhigeetha.com

ವಾಗ್ಬಾಣ – ಢೋಂಗಿ ಗುರುಗಳು ಕಾನೂನಿಗೆ ಅತೀತರೇನಲ್ಲ….! ದು ಗು ಲಕ್ಷ್ಮಣ್

0

ಮತ್ತೊಬ್ಬ ಸ್ವಘೋಷಿತ ದೇವಮಾನವ ನ್ಯಾಯಾಲಯದ ಶಿಕ್ಷೆಗೆ ಗುರಿಯಾಗಿದ್ದಾನೆ. ತನ್ನನ್ನು ದೇವಮಾನವನೆಂದು ಕರೆಸಿಕೊಂಡು ಅಸಂಖ್ಯಾತ ಹಿಂಬಾಲಕರನ್ನು ಹೊಂದಿದ್ದ, ಅಪಾರ ಸಂಪತ್ತನ್ನು ಕ್ರೂಢೀಕರಿಸಿದ್ದ, ಉನ್ನತ ಮಟ್ಟದ ರಾಜಕೀಯ ಸಂಪರ್ಕವನ್ನು ಸಾಧಿಸಿದ್ದ ಅಸಾರಾಂ ಬಾಪು ಅತ್ಯಾಚಾರಣ ಪ್ರಕರಣವೊಂದರಲ್ಲಿ ಅಪರಾಧಿ ಎಂದು ಸಾಬೀತಾಗಿ ಜೀವಾವಧಿ ಶಿಕ್ಷೆ ಅನುಭವಿಸಬೇಕಾಗಿ ಬಂದಿದೆ. ಅಸಾರಾಂ ಬಾಪು ವಿರುದ್ಧ ಅತ್ಯಾಚಾರ ಪ್ರಕರಣವೋಂದೇ ಅಲ್ಲ, ಅಕ್ರಮ ಭೂಕಬಳಿಕೆ, ಬೆದರಿಕೆಯೊಡ್ಡಿದ್ದು ಹಾಗೂ ಕೊಲೆಗೆ ಪ್ರಚೋದನೆ ನೀಡಿದ ಆರೋಪ ಪ್ರಕರಣಗಳೂ ವಿಚಾರಣೆಗಾಗಿ ಕಾದಿವೆ ಜಗತ್ತಿನಾದ್ಯಂತ ೪೦೦ಕ್ಕೂ ಹೆಚ್ಚು ಆಶ್ರಮಗಳನ್ನು ಹೊಂದಿರುವ ಅಸಾರಾಂ ಬಾಪು ೨೦೧೩ರಲ್ಲಿ ಶಾಲಾ ಬಾಲಕಿಯೊಬ್ಬಳ ಮೇಲೆ ಅಸಾರಾಂ ಮತ್ತು ಆತನ ಪುತ್ರ ಇಬ್ಬರು ಸಹೋದರಿಯರ ಮೇಲೆ ಅತ್ಯಾಚಾರವೆಸಗಿದ ಆರೋಪವೂ ಅಂಟಿಕೊಂಡಿತ್ತು.
ಯಾರು ಈ ಅಸಾರಾಂ ಬಾಪು?
ಅಸಾರಾಂ ಬಾಪು ಅವರ ನಿಜವಾದ ಹೆಸರು ಅಸುಮಲ್ ಸಿರುಮಲಾನಿ ಆದರೆ ಅಸಾರಾಂ ಬಾಪು ಎಂದೇ ಚಿರಪರಿಚಿತ ಈಗಿನ ಪಾಕಿಸ್ತಾನದ ಸಿಂಧ್‌ನಲ್ಲಿ ೧೯೪೧ರಲ್ಲಿ ಜನಿಸಿದ ಅಸಾರಾಂ, ೧೯೪೭ರ ವಿಭಜನೆಯ ಬಳಿಕ ಅಹ್ಮದಾಬಾದ್ಗೆ ಬಂದಿದ್ದರು. ‘ಸಂತ’ ಅಸಾರಾಂ ಬಾಪುಕೀ ಜೀವನ್ ಜಂಕಿ’ ಎಂಬ ಆತನ ಆತ್ಮಚರಿತ್ರೆಯಲ್ಲಿ ಬರೆದುಕೊಂಡಂತೆ, ಆತ ಆಧ್ಯಾತ್ಮಿಕ ಜ್ಞಾನಕ್ಕಾಗಿ ಹಲವಾರು ಗುರುಗಳನ್ನು ಹುಡುಕಿದನಂತೆ ೧೯೭೨ರಲ್ಲಿ ಗುಜರಾತ್‌ನ ಸಬರ್ಮತಿ ನದಿಯ ಬಳಿಯಿರುವ ಮೊಟೆರಾ ಎಂಬ ಹಳ್ಳಿಯಲ್ಲಿ ಗುಡಿಸಲು ಕಟ್ಟಿಕೊಂಡು ಅಲ್ಲಿ ಪ್ರವಚನ ನೀಡುತ್ತಿದ್ದ. ಮೊದಲು ೫-೧೦ ಮಂದಿ ಇದ್ದ ಭಕ್ತರ ಸಂಖ್ಯೆ ಲಕ್ಷಗಳಲ್ಲಿ ಏರಿಕೆಯಾಗುತ್ತಾ ಹೋಯಿತು. ಜನಪ್ರಿಯತೆಯೂ ಏರಿತು. ಆಶ್ರಮದ ವತಿಯಿಂದ ೪೦ ವಸತಿ ಶಾಲೆಗಳು, ವಿವಿಧ ಭಾಷೆಯ ನೂರಕ್ಕೂ ಹೆಚ್ಚು ಪತ್ರಿಕೆಗಳು / ನಿಯತ ಕಲಿಕೆಗಳು ಹಾಗೂ ಆಯುರ್ವೇದ ಸಂಸ್ಥೆಯೂ ನಡೆಯುತ್ತಿದೆ.
ಹಣ, ಖ್ಯಾತಿ, ಪ್ರಸಿದ್ಧ ಎಂಥವರ ತಲೆಯನ್ನು ತಿರುಗಿಸಿಬಿಡುತ್ತದೆ. ಅಸಾರಾಂ ಕೂಡ ಈ ಮಾತಿಗೆ ಹೊರತಾಗಲಿಲ್ಲ. ಪ್ರಸಿದ್ಧಿಯ ಉತ್ತುಂಗದಲ್ಲಿರುವಾಗಲೇ ಜೋಧ್‌ಪುರದಲ್ಲಿ ೧೬ ವರ್ಷದ ಹುಡುಗಿಯ ಜೊತೆ ಅಸಹಜ ಸೆಕ್ಸ್ಗೆ ಒತ್ತಾಯಿಸಿ, ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿದ. ಆಗ ಅಸಾರಾಂ ವಯಸ್ಸು ಕೇವಲ ೭೬. ಈ ವಯಸ್ಸಿನಲ್ಲಿ ಇದೆಲ್ಲ ಬೇಕಿತ್ತಾ ಎಂಬ ಪ್ರಶ್ನೆ ಸಹಜ. ಹುಣುಸೆಮರಕ್ಕೆ ಮುಪ್ಪು ಬರುವುದಿಲ್ಲವಂತೆ. ಅಸಾರಾಂದೂ ಎಂತಹದೂ ಎಂಬುದು ನಮ್ಮೆಲ್ಲರನ್ನೂ ದಂಗುಬಡಿಸುವ ಪ್ರಶ್ನೆ.
ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿ ಬಂಧನಕ್ಕೊಳಗಾಗಿದ್ದರೂ ಪ್ರಕರಣದಿಂದ ಬಚಾವಾಗಲು ಅಸಾರಾಂ ನಾನಾ ಕುತಂತ್ರ ನಡೆಸಿದ್ದುಂಟು. ತನಗೆ ಅನಾರೋಗ್ಯ ಕಾಡುತ್ತಿದೆ, ಹಾಗಾಗಿ ಜಾಮೀನು ನೀಡಬೇಕೆಂದು ರಾಜಸ್ಥಾನ ಹೈಕೋರ್ಟ್ಗೆ ಮೊರೆ ಹೋದಾಗ ಆ ಅರ್ಜಿ ತಿರಸ್ಕೃತವಾಗಿತ್ತು. ಅಸಾರಾಂ ಜಾಮೀನು ಅರ್ಜಿಯಲ್ಲಿ ಸುಳ್ಳು ಆರೋಗ್ಯ ಪ್ರಮಾಣ ಪತ್ರ ನೀಡಿದ್ದಾರೆಂದು ಕೋರ್ಟ್ ೧ ಲಕ್ಷ ರೂ. ದಂಡ ವಿಧಿಸಿತ್ತು. ೨೦೦೮ರಲ್ಲಿ ಈ ಮಕ್ಕಳ ಪೋಷಕರ ಆಗ್ರಹದ ಮೇರೆಗೆ ಸಿ.ಐ.ಡಿ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಕೋರ್ಟ್ಗೆ ವರದಿ ಸಲ್ಲಿಸಿದೆ. ಆ ಸಂಬಂಧ ವಿಚಾರಣೆಯೂ ನಡೆದಿದೆ.
ಕಾನೂನಿನ ಮುಂದೆ ಎಲ್ಲರೂ ಒಂದೇ
ಆಧ್ಯಾತ್ಮಿಕ ಗುರುವೇ ಇರಬಹುದು, ಮಠದ ಸ್ವಾಮಿಜಿಯೇ ಆಗಿರಬಹುದು, ಪ್ರಭಾವಿ ವ್ಯಕ್ತಿಯೇ ಇರಬಹುದು. ಆದರೆ ಯಾರೂ ಕಾನೂನಿಗೆ ಅತೀತರಲ್ಲ. ಕಾನೂನಿನ ಮುಂದೆ ಎಲ್ಲರೂ ಒಂದೇ. ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಅಸಾರಾಂ ಬಾಪುಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಜೋಧ್‌ಪುರ ನ್ಯಾಯಾಲಯ ಈಗ ಇಡೀ ದೇಶಕ್ಕೆ ರವಾನಿಸಿರುವ ಸಂದೇಶ ಕೂಡ ಇದೇ. ಅತಿ ದುರ್ಬಲದಾದ ವ್ಯಕ್ತಿಗಳೂ ಕೆಲವೊಮ್ಮೆ ಬಲಿಷ್ಠ, ಪ್ರಭಾವಿ ವ್ಯಕ್ತಿಗಳ ವಿರುದ್ಧ ಕಾನೂನು ಸಮರ ಸಾರಿ ಗೆಲ್ಲಲು ಸಾಧ್ಯ ಎಂಬುದು ಈ ತೀರ್ಪಿನಿಂದ ಹೊರಹೊಮ್ಮಿರುವ ಇನ್ನೊಂದು ಸಂದೇಶ. ಅಸಾರಾಂ ಬಾಪು ಮತ್ತವರ ಬೆಂಬಲಿಗರು ನ್ಯಾಯಾಂಗದ ವಿಚಾರಣೆಯನ್ನು ಹಾದಿ ತಪ್ಪಿಸಲು ನಾನಾ ಬಗೆಯ ಕುತಂತ್ರ ನಡೆಸಿದ್ದರು. ಸಾಕ್ಷಿಗಳ ಮೇಲೆ ಹಲ್ಲೆ ನಡೆಸಲಾಗಿತ್ತು. ಮೂವರು ಸಾಕ್ಷಿಗಳನ್ನು ಕೊಲೆ ಮಾಡಲಾಗಿತ್ತು. ಆದರೂ ಅಂತಿಮವಾಗಿ ನ್ಯಾಯವೇ ಗೆದ್ದಿದೆ.
ಹರ್ಯಾಣದಲ್ಲಿ ಡೇರಾ ಸಚ್ಚಸೌಧವೆಂಬ ಸಿಖ್‌ಪಂಥ ಕಟ್ಟಿ ದೊಡ್ಡ ಸಾಮ್ರಾಜ್ಯವನ್ನೆÃ ನಿರ್ಮಿಸಿದ್ದ ರಾಮ್‌ರಹೀಮ್ ಗುರ್ಮಿತ್‌ಸಿಂಗ್ ಎಂಬ ಅತ್ಯಾಧುನಿಕ ಆದ್ಯಾತ್ಮಿಕ ಗುರು ಮಾತ್ರವಾಗಿರದೆ ಕಲಾವಿದ, ಸಿನಿಮಾ ನಿರ್ದೇಶಕ, ಸಂಗೀತ ನಿರ್ದೇಶಕ, ನಿರ್ಮಾಪಕನೂ ಆಗಿದ್ದ. ಆದರೇನು, ಆತನೆಸಗಿದ ಒಂದೊಂದೇ ಬಾನಗಡಿಗಳು ಬಯಲಾಗಿ, ಕೊನೆಗೆ ಬಂಧನಕ್ಕೊಳಗಾಗ ಬೇಕಾಯಿತು. ಆತನಿಗೆ ಕೋರ್ಟ್ ಶಿಕ್ಷೆ ಘೋಷಿಸಿದಾಗ, ಆತನ ಬೆಂಬಲಿಗರು ವ್ಯಾಪಕ ಹಿಂಸಾಚಾರ ನಡೆಸಿ, ೩೮ ಮಂದಿ ಅಮಾಯಕರ ಸಾವಿಗೆ ಕಾರಣರಾಗಿದ್ದರು.
ರಾಂರಹೀಂ, ಅಸಾರಾಂ ಬಾಪುರಂತಹ ಢೋಂಗಿ ಗುರುಗಳು ಈ ಕಾಲದಲ್ಲಷ್ಟೆÃ ಅಲ್ಲ, ಹಿಂದೆಯೂ ಇದ್ದರು. ೧೯೩೮ರಷ್ಟು ಹಿಂದೆಯೇ ಸಿರಿಗೆರಿಯ ಹಿಂದಿನ ಗುರುಗಳಾಗಿದ್ದ ಶ್ರಿÃ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ದಿನಚರಿಯಲ್ಲಿ ಇಂತಹ ಲಂಪಟ ‘ಧರ್ಮ ದುರಂಧರ’ರ ಬಗ್ಗೆ ನಿಷ್ಠುರವಾಗಿ ದಾಖಲಿಸಿದ ನುಡಿಗಳು ಹೀಗಿವೇ: “ ಅಂiÉÆ್ಯÃ ಮೂಡಭಕ್ತರೇ! ನಿಮ್ಮ ಭಕ್ತಿಗೆ ಸರಿಯಾದ ಗುರುಗಳನ್ನು ಪಡೆದಿರುವಿಕೆ ನಿಮಗೇನು ಹುಚ್ಚು ಹಿಡಿದಿದೆ? ಭ್ರಷ್ಟರನ್ನು ಪೂಜಿಸಿಪರಮೇಶ್ವರನ ರಾಜ್ಯದಲ್ಲಿ ಅಸತ್ಯಕ್ಕೆ ಬೆಲೆಯನ್ನೆÃರಿಸುತ್ತಿರುವಿರಲ್ಲಾ! ಅಂiÉÆ್ಯÃ, ನಿರ್ದಯಿ ಗುರುವರ್ಗವೇ! ಪಾಪವನ್ನು ಮಾಡಿ ಜಗತ್ತನ್ನು ಹಾಳುಮಾಡುತ್ತಿರುವಿರಲ್ಲಾ! ವ್ಯಭಿಚಾರಿಗಳು ಗುರುಗಳೆಂದು ಹೇಳಿಸಿಕೊಳ್ಳಲು ನಾಚಿಕೆಯಾಗುವುದಿಲ್ಲವಲ್ಲಾ! ಅಧಮ ಗುರುವರ್ಗ! ಪತಿತ ಗುರುವರ್ಗ! ಅಧಮರೇ ಶೀಘ್ರವಾಗಿ ತೊಲಗಿರಿ.”
ಹಿಂದುಗಳಲ್ಲಷ್ಟೆÃ್ಲ ಅಲ್ಲ…!
ಹಿಂದು ಸಮುದಾಯದಲ್ಲಿ ಮಾತ್ರ ಇಂತಹ ಢೋಂಗಿ ಗುರುಗಳಿದ್ದಾರೆಂದು ಮುಸ್ಲಿಂ, ಕ್ರೆöÊಸ್ತರು ಬೆನ್ನುತಟ್ಟಿಕೊಳ್ಳುವ ಸ್ಥಿತಿಯೇನಿಲ್ಲ. ಆ ಸಮುದಾಂiÀiಗಳಲ್ಲೂ ಅಂತಹ ಢೋಂಗಿಗಳು ಹೇರಳವಾಗಿದ್ದಾರೆ. ಇಡೀ ಕ್ಯಾಥೋಲಿಕ್ ಚರ್ಚ್ ಲೈಂಗಿಕ ಅತ್ಯಾಚಾರ ಹಾಗೂ ಕಾಮಕಾಂಡಗಳಲ್ಲಿ ಸಿಲುಕಿ ತೊಳಲಾಡುತ್ತಿದೆ. ಕೇರಳದಲ್ಲಿ ಒಂದು ಡಜನ್‌ಗೂ ಹೆಚ್ಚು ಫಾದ್ರಿಗಳು, ಬಿಷಪ್‌ಗಳು ಅತ್ಯಾಚಾರ ಆರೋಪ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ೨೦೦೯ರ ಫೆಬ್ರವರಿಯಲ್ಲಿ ಡಾ.ಸಿಸ್ಟರ್ ಜೆಸ್ಮೆ ಎಂಬ ನನ್ ಬರೆದ ‘ಅಮೇನ್ : ಆಟೋಗ್ರಫಿ ಆಫ್ ಎ ನನ್’ ಎಂಬ ಕೃತಿಯಲ್ಲಿ ತನ್ನ ಸೀನಿಯರ್‌ಗಳು ಹೇಗೆ ಶಾರೀರಿಕವಾಗಿ, ಮಾನಸಿಕವಾಗಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಬಹಿರಂಗಪಡಿಸಿದ್ದರು. ಇದು ಇಡೀ ಕೇರಳದ ಚರ್ಚ್ಗಳನ್ನು ಬೆಚ್ಚಿ ಬೀಳುವಂತೆ ಮಾಡಿತ್ತು.
ಇನ್ನು ಮುಸ್ಲಿಂ ಇಮಾಮ್‌ಗಳೂ, ಮೌಲಾನಾಗಳು ಮೌಲ್ವಿಗಳು ನಡೆಸುವ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗುವುದೇ ಇಲ್ಲ. ಏಕೆಂದರೆ ಆ ಜನಾಂಗದಲ್ಲಿ ‘ಬಹುಪತ್ನಿತ್ವ ಪದ್ಧತಿ’ ಮುಸ್ಲಿಂ ಧಾರ್ಮಿಕ ಗುರುಗಳ ಪಾಲಿಗೆ ತಮ್ಮನ್ನು ಇಂತಹ ಆರೋಪಗಳಿಂದ ರಕ್ಷಿಸಿಕೊಳ್ಳಲು ಒಂದು ವಜ್ರ ಕವಚವೇ ಆಗಿ ಬಿಟ್ಟಿದೆ!
ಅತ್ಯಾಚಾರಿ ಬಾಬಾಗಳು, ಫಾರ‍್ಗಳು,ಮುಲ್ಲಾ ಮೌಲ್ವಿಗಳು ಎಲ್ಲೆಡೆಯೂ ಇದ್ದಾರೆ. ಇಂಥವರು ಪ್ರಭಾವಿಗಳಾಗಿರುವುದರಿಂದ ತಮ್ಮ ತೆವಲು ತೀರಿಸಿಕೊಳ್ಳಲು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಢೋಂಗಿ ಗುರುಗಳು ತಮ್ಮ ನಾಟಕ ಬಯಯಲಾಗದಂತೆ ಎಚ್ಚರವಹಿಸಿದಷ್ಟೆÃ ಅವರನ್ನು ಕುರುಡಾಗಿ ನಂಬುವ ಭಕ್ತಗಡಣವೂ ಎಚ್ಚರವಹಿಸಿದರೆ, ಪ್ರಜ್ಞಾವಂತಿಕೆ ಮೆರೆದರೆ ಈ ಧಾರ್ಮಿಕ ಢೋಂಗಿಗಳ ಆಟಕ್ಕೆ ಒಂದು ತಾರ್ಕಿಕ ಅಂತ್ಯ ಕಾಣಿಸಬಹುದು.
ಅಂತಹ ನಿರಂತರ ಎಚ್ಚರ ಭಕ್ತಸಮೂಹದಲ್ಲಿ ಅರಳಬೇಕಾಗಿದೆ. ನಕಲಿ ಗುರುಗಳನ್ನು ಸಂದೇಹಿಸಿದರೆ ಯಾವ ಪಾಪವೂ ತಟ್ಟದು ಎಂಬ ನಂಬಿಕೆ ಜನರಲ್ಲಿ ಬಲಿಯಬೇಕಾಗಿದೆ.ಪಾಪಿ ಗುರುಗಳ ಸಂಖ್ಯೆ ಹೆಚ್ಚದಂತೆ ನಿಯಂತ್ರಿಸುವ ಹೊಣೆಗಾರಿಕೆಕೂಡ ನಮ್ಮದೆ ಆಗಿದೆ. ಇದು ಜನತೆಯ ನೈತಿಕ ಜವಾಬ್ದಾರಿಯಾಗಿದೆ.

Source – Sakhigeetha.com

ದಲಿತರ ಮದುವೆಗೆ ಬ್ರಾಹ್ಮಣರ ಸಾರಥ್ಯ! ದು.ಗು. ಲಕ್ಷ್ಮಣ್

0
ಸಾಂದರ್ಭಿಕ ಚಿತ್ರ

ಈ ಶೀರ್ಷಿಕೆ ನೋಡಿ ನಿಮಗೆ ಅಚ್ಚರಿ ಆದರೂ ಆಗಬಹುದು. ಶೀರ್ಷಿಕೆ ಕೊಂಚ ತಪ್ಪಾಗಿರಬಹುದು. ಅದು ‘ದಲಿತರ ಮದುವೆಗೆ ಬ್ರಾಹ್ಮಣರ ಪೌರೋಹಿತ್ಯ’ ಎಂದಿರಬೇಕಿತ್ತು ಎಂದೂ ಅನ್ನಿಸಬಹುದು. ಆದರೆ ಹಾಗೇನಿಲ್ಲ. ಶೀರ್ಷಿಕೆ ಸರಿಯಾಗಿಯೇ ಇದೆ. ದಲಿತರ ಮದುವೆಗೆ ಬ್ರಾಹ್ಮಣರೊಬ್ಬರು ಸಂಪೂರ್ಣ ಸಾರಥ್ಯ ವಹಿಸಿ, ಮದುವೆ ಸಾಂಗವಾಗಿ ನೆರವೇರಿಸಿದ, ಸಾಮರಸ್ಯಕ್ಕೊಂದು ಹೊಸ ಭಾಷ್ಯ ಬರೆದ ವಿದ್ಯಮಾನವಿದು.

ಆತ ನಾಗಪ್ಪ. ದಲಿತ ಸಮುದಾಯಕ್ಕೆ ಸೇರಿದಾತ. ತಂದೆತಾಯಿಯರನ್ನು ಚಿಕ್ಕಂದಿನಲ್ಲೆÃ ಕಳೆದುಕೊಂಡು ಚಿಕ್ಕ ಹುಡುಗ ನಾಗಪ್ಪ ತುತ್ತು ಅನ್ನಕ್ಕಾಗಿ ಆಶ್ರಯಿಸಿದ್ದು ಹೊಸನಗರ ತಾಲ್ಲೂಕು ಸಂಪೆಕಟ್ಟೆ ಸಮೀಪದ ಗುಬ್ಬಗೋಡು ತಿಪ್ಪಯ್ಯ ಎಂಬ ಬ್ರಾಹ್ಮಣರ ಮನೆಯನ್ನು. ಮನೆಯ ಕೊಟ್ಟಿಗೆಯ ಕೆಲಸದಿಂದ ಹಿಡಿದು ತೋಟದ ಕೆಲಸ ಮತ್ತಿತರ ಎಲ್ಲ ಕೆಲಸಗಳನ್ನು ಕಲಿತು ನಿಯತ್ತಾಗಿ ಬದುಕ ತೊಡಗಿದ ನಾಗಪ್ಪನಿಗೆ ತಿಪ್ಪಯ್ಯ ತಮ್ಮ ತೋಟದ ಮೂಲೆಯಲ್ಲೆ ಮನೆಯೊಂದನ್ನು ಕಟ್ಟಿಸಿಕೊಟ್ಟರು. ದೊಡ್ಡವನಾದ ಬಳಿಕ ಮದುವೆಯನ್ನೂ ಮಾಡಿಸಿದರು. ಮೂವರು ಹೆಣ್ಣುಮಕ್ಕಳು ತಂದೆಯೂ ಆದ ನಾಗಪ್ಪನನ್ನು ಎಲ್ಲರೂ ಕರೆಯುತ್ತಿದ್ದುದು ಮಾತ್ರ ಹುಡುಗ ಎಂದೇ. ಆತನ ನಿಜವಾದ ಹೆಸರು ಈಗಲೂ ಹಲವರಿಗೆ ಸಂಪಕಟ್ಟೆ ಸುತ್ತಮುತ್ತ ಗೊತ್ತಿಲ್ಲ.

ಹುಡುಗ(ನಾಗಪ್ಪ)ನ ಮಗಳು ಬೆಳೆದು ದೊಡ್ಡವಳಾದಾಗ ಆಕೆಯ ಮದುವೆ ಮಾಡಿಸುವುದು ಹೇಗೆಂಬ ಸಮಸ್ಯೆ ಹುಡುಗನದು. ಕೂಲಿ ಕೆಲಸ ಮಾಡಿಕೊಂಡಿರುವ ತಾನು ಮಗಳ ಮದುವೆಗೆ ಆಗುವಷ್ಟು ಹಣ ತರುವುದು ಎಲ್ಲಿಂದ? ಸಾಲ ಮಾಡಿದರೆ ತೀರಿಸುವುದಾದರೂ ಹೇಗೆ? ಆದಾಯದ ಬೇರೆ ಮೂಲಗಳು ಇಲ್ಲದಿದ್ದಾಗ ಇಂತಹ ಚಿಂತೆ ಇತರರನ್ನು ಕಾಡುವಂತೆ ಹುಡುಗನನ್ನೂ ಕಾಡಿದ್ದು ನಿಜ. ಹುಡುಗನ ಆ ಚಿಂತೆಗೆ ಪರಿಹಾರ ನೀಡಿದವರು ತಿಪ್ಪಯ್ಯನವರ ಮಗ ಪಿ.ಟಿ.ಗಣಪತಿ.

ತಿಪ್ಪಯ್ಯ ಕಾಲವಾದ ಬಳಿಕ ಮನೆಯ ಎಲ್ಲ ಜವಾಬ್ದಾರಿಗಳನ್ನು ಹೊತ್ತ ಗಣಪತಿ, ಇದೀಗ ತಮ್ಮ ಮನೆಯಲ್ಲಿ ೪ ದಶಕಗಳಿಂದ ನಿಯತ್ತಾಗಿ ಕೂಲಿ ಕೆಲಸ ನಿರ್ವಹಿಸುತ್ತಿದ್ದ ಹುಡುಗನ ಮೊದಲನೆಯ ಮಗಳ ಮದುವೆಯ ಜವಾಬ್ದಾರಿಯನ್ನೂ ಹೊತ್ತರು. ಮದುವೆಗೆ ಅಗತ್ಯವಿರುವ ಜವಳಿ, ಮಂಗಲಸೂತ್ರ, ಆಭರಣ, ಊಟೋಪಚಾರ ಇತ್ಯಾದಿ ಎಲ್ಲ ಖರ್ಚುವೆಚ್ಚಗಳನ್ನೂ ನಿಭಾಯಿಸಿದರು. ಸಂಪೆಕಟ್ಟೆಯ ಗಣಪತಿ ದೇವಸ್ಥಾನದಲ್ಲಿ ಕಳೆದ ಮೇ೨೫ರಂದು ನಡೆದ ಹುಡುಗನ ಮಗಳು ಮಮತಾಳ ಮದುವೆಗೆ ಸೇರಿದವರ ಸಂಖ್ಯೆ ಬರೋಬ್ಬರಿ ೫೫೦. ದಲಿತರಷ್ಟೆÃ ಅಲ್ಲದೆ ಬ್ರಾಹ್ಮಣರು, ಈಡಿಗರು, ಮತ್ತಿತರ ಜಾತಿಯವರೆಲ್ಲ ಬಂದು ಮದುಮಕ್ಕಳಿಗೆ ಶುಭ ಹಾರೈಸಿ, ಉಡುಗೊರೆಯಿತ್ತು ಊಟ ಮಾಡಿ ತೆರಳಿದ ದೃಶ್ಯ, ಬ್ರಾಹ್ಮಣರೇ ಹೆಚ್ಚಾಗಿರುವ ಸಂಪಕಟ್ಟೆಯಲ್ಲಿ ಅಪರೂಪದ್ದಾಗಿತ್ತು. ಆ ಮದುವೆಗಾಗಿ ಗಣಪತಿ ಸುಮಾರು ಒಂದೂಮುಕ್ಕಾಲು ಲಕ್ಷ ರೂ.ಹಣವನ್ನು ಖರ್ಚುಮಾಡಿದ್ದಾರೆ. ದೂರದ ಬೆಂಗಳೂರಿನಿಂದ ಆಹ್ವಾನಿತನಾಗಿ ನಾನೂ ಆ ಮದುವೆಯಲ್ಲಿ ಪಾಲ್ಗೊಂಡು ವಧುವರರಿಗೆ ಅಕ್ಷತೆ ಹಾಕಿ, ಉಡುಗೊರೆ ನೀಡಿ ಊಟ ಮಾಡಿ ಬಂದೆ.

ಹುಡುಗನ ಮಗಳ ಮದುವೆಯನ್ನು ಗಣಪತಿ ಎಲ್ಲ ಖರ್ಚು ಮೊತ್ತ ಭರಿಸಿ ಮಾಡಲೇ ಬೇಕೆಂದೇನೂ ಇರಲಿಲ್ಲ. ಒಂದಿಷ್ಟು ಹಣಕೊಟ್ಟು ನೀನೇ ನಿರ್ವಹಿಸಿಕೊ ಎಂದು ಸುಮ್ಮನಾಗಬಹುದಿತ್ತು. ಆದರೆ ನಾಲ್ಕು ದಶಕಗಳಿಂದ ನಿಯತ್ತಿನಿಂದ ದುಡಿದ ಮನೆಯಾಳು ಹುಡುಗನನ್ನು ಗಣಪತಿ ನಡುನೀರಿನಲ್ಲಿ ಕೈಬಿಡಲಿಲ್ಲ. ಹಣ ಖರ್ಚು ಮಾಡಿದಲ್ಲದೆ ಪುರೋಹಿತರು, ಊಟ ತಿಂಡಿ ವ್ಯವಸ್ಥೆ, ಆಮಂತ್ರಣ ಪತ್ರಿಕೆ ಮುದ್ರಣ, ಬಡಿಸುವ ವ್ಯವಸ್ಥೆ ಇತ್ಯಾದಿ ಎಲ್ಲದರ ಉಸ್ತುವಾರಿ ವಹಿಸಿದ ಅವರು ತಮ್ಮ ಮನೆಯ ಮದುವೆ ನಡೆದರೆ ಹೇಗಿರುತ್ತಾರೋ ಹಾಗೆ ನಡೆದುಕೊಂಡಿದ್ದು ವಿಶೇಷ. ಒಟ್ಟಾರೆ ಗಣಪತಿಯವರ ಸಾರಥ್ಯದಲ್ಲಿ ಮನೆಯಾಳು ಹುಡುಗನ ಮಗಳ ಮದುವೆ ಅತ್ಯಂತ ಅಚ್ಚುಕಟ್ಟಾಗಿ, ಸಾಂಗವಾಗಿ ಊರಿನ ಹತ್ತುಸಮಸ್ತರು ಭಲೆಭಲೆ ಎನ್ನುವಂತೆ ನಡೆಯಿತು. ನಾಗಪ್ಪನಿಗಂತೂ ತನ್ನ ಮಗಳ ಮದುವೆ ಇಷ್ಟೊಂದು ಚೆನ್ನಾಗಿ ನಡೆಯಬಹುದೆಂಬ ನಿರೀಕ್ಷೆಯೇ ಇರಲಿಲ್ಲ.

ಬ್ರಾಹ್ಮಣರೆಂದರೆ ಮೇಲ್ವರ್ಗದವರು, ದಲಿತರನ್ನು ಶೋಷಿಸುವವರು ಎಂದೆಲ್ಲ ಈಗಲೂ ಕೆಲವು ವಿಚಾರವಾದಿಗಳು ಬ್ರಾಹ್ಮಣರ ವಿರುದ್ಧ ದ್ವೆÃಷಬೀಜ ಬಿತ್ತುತ್ತಿರುವ ಸನ್ನಿವೇಶದಲ್ಲಿ ಸದ್ದುಗದ್ದಲವಿಲ್ಲದೆ ಸಹಜ ಕರ್ತವ್ಯವೆಂಬಂತೆ ನಾಗಪ್ಪನ ಮಗಳ ಮದುವೆಯನ್ನು ಸಾಂಗವಾಗಿ ನೆರೆವೇರಿಸಿದ ಗಣಪತಿಯಂಥವರು ವಿರಳರಲ್ಲಿ ವಿರಳರು. ಅಂಥವರ ಸಂಖ್ಯೆ ಹೆಚ್ಚಾದಾಗ ಸಮಾಜದಲ್ಲಿ ಅಸ್ಪೃಶ್ಯತೆ, ಜಾತೀಯತೆಗಳು ದೂರವಾಗಿ ಸಾಮರಸ್ಯದ ವಾತಾವರಣ ಮಾಡಬಲ್ಲುದು.
ಮಹೇಶ್ ಸಾವನಿ ಮೇಲ್ಪಂಕ್ತಿ
ಮದುವೆ ಎಂಬುದು ಪ್ರತಿಯೊಬ್ಬರ ಬದುಕಿನಲ್ಲಿ ಒಂದು ಮಹತ್ತರ ಘಟನೆ. ಈಗಂತೂ ಹೆಣ್ಣುಮಕ್ಕಳ ಮದುವೆ ಮಾಡುವುದೆಂದರೆ ತಂದೆತಾಯಿಗಳ ಪಾಲಿಗೆ ಹಿಮಾಲಯ ಪರ್ವತ ಏರುವುದಕ್ಕಿಂತಲೂ ಕಡುಕಷ್ಟದ ಕೆಲಸ. ದೀನದಲಿತರು, ಆರ್ಥಿಕವಾಗಿ ಹಿಂದುಳಿದವರ ಪಾಲಿಗಂತೂ ಮದುವೆ ಕರ‍್ಯ ಒಂದು ಅಗ್ನಿಪರೀಕ್ಷೆ.

ಇಂತಹ ಹಿಂದುಳಿದ, ಅಸಾಹಾಯಕ ಹೆಣ್ಣುಮಕ್ಕಳ ಪಾಲಿಗೆ ಗುಜರಾತಿನ ಭಾವನಗರದ ವಜ್ರೊÃದ್ಯಮಿ ಮಹೇಶ್ ಸಾವನಿ ದೇವರಾಗಿದ್ದಾರೆ. ಸಾವನಿ ಇದುವರೆಗೆ ೫೦೦ಕ್ಕೂ ಹೆಚ್ಚು ಅಸಹಾಯಕ, ಆರ್ಥಿಕ ದುರ್ಬಲ ಹೆಣ್ಣುಮಕ್ಕಳ ಮದುವೆ ಮಾಡಿಸಿ, ಅವರಿಗೆಲ್ಲ ನೆಮ್ಮದಿಯ ಬದುಕು ಕಲ್ಪಿಸಿಕೊಟ್ಟಿದ್ದಾರೆ. ಇವರಿಂದ ಉಪಕೃತರಾದ ಹೆಣ್ಣುಮಕ್ಕಳು ಸಾವನಿಯವರನ್ನು ಮಹೇಶ್‌ಪಪ್ಪ ಎಂದೇ ಪ್ರಿÃತಿಯಿಂದ ಸಂಬೋಧಿಸುತ್ತಾರೆ.

ಮಹೇಶ್ ಸಾವನಿಯವರಿಗೆ ಇಂತಹ ಔದಾರ್ಯದ ಗುಣ ಮೂಡಿದ್ದು ಕುಟುಂಬದಲ್ಲಿ ನಡೆದ ಒಂದು ಅವಘಢದಿಂದಾಗಿ. ಅವರ ತಮ್ಮ ಚಿಕ್ಕ ವಯಸ್ಸಿನಲ್ಲೆÃ ಇದ್ದಕ್ಕಿದ್ದಂತೆ ಸಾವಿಗೀಡಾದರು. ಅವರ ಇಬ್ಬರು ಹೆಣ್ಣುಮಕ್ಕಳು ಅನಾಥರಾದರು. ಮಹೇಶ್ ಅವರಿಗೆ ಈ ಘಟನೆ ಹೃದಯ ಕಲಕುವಂತೆ ಮೂಕಿತು. ಆ ಇಬ್ಬರು ಹೆಣ್ಣುಮಕ್ಕಳಿಗೂ ತಂದೆಯ ಸ್ಥಾನದಲ್ಲಿ ನಿಂತು ಮದುವೆ ನೆರೆವೇರಿಸಿದರು.

ಇದರಲ್ಲಿ ವಿಶೇಷವೇನೂ ಇಲ್ಲ. ಆದರೆ ವಿಶೇಷವಿರುವುದು ಸಾವನಿಯವರ ಅನಂತರದ ಚಿಂತನೆÀ ಹಾಗೂ ಕೃತಿಯಲ್ಲಿ. ತನ್ನ ಅಗಲಿದ ತಮ್ಮನ ಹೆಣ್ಣುಮಕ್ಕಳ ಸ್ಥಿತಿ ಸಮಾಜದಲ್ಲಿ ಇನ್ನೆಷ್ಟು ಮಂದಿಗೆ ಬಂದಿರಬಹುದು. ಅವರಿಗೆಲ್ಲ ತಾನು ತಂದೆಯ ಸ್ಥಾನದಲ್ಲಿ ನಿಂತು ಏಕೆ ಮದುವೆ ಮಾಡಿಸಬಾರದು? ಅವರಿಗೆಲ್ಲ ನೆಮ್ಮದಿಯ ಬದುಕು ಏಕೆ ಕರುಣಿಸಬಾರದು? ಇಂತಹುದೊಂದು ಚಿಂತನೆ ಮನದಲ್ಲಿ ಉದಿಸಿದ್ದೆÃ ತಡ, ಸಾವನಿ ಮತ್ತೆ ಹಿಂತಿರುಗಿ ನೋಡಲಿಲ್ಲ. ಅಸಹಾಯಕ ಹೆಣ್ಣು ಮಕ್ಕಳನ್ನು ಹುಡುಕಿ, ಪ್ರತಿಯೊಂದು ಮದುವೆಗೂ ಕನಿಷ್ಠ ೪ ಲಕ್ಷ ರೂ. ಖರ್ಚುಮಾಡುವ ಸೇವೆಯನ್ನು ಅವರು ವ್ರತದಂತೆ ಆಚರಿಸಿಕೊಂಡು ಬಂದಿದ್ದಾರೆ. ಇಂತಹ ಮದುವೆಗಳನ್ನು ಮಾಡಿಸುವಾಗ ಅವರು ಜಾತಿ, ಮತಗಳನ್ನು ಪರಿಗಣಿಸಿಲ್ಲ ಎನ್ನುವುದು ಇನ್ನೊಂದು ವಿಶೇಷ.

ಮಹೇಶ್ ಸಾವನಿ ಬಳಿ ಬೇಕಾದಷ್ಟು ಸಂಪತ್ತಿದೆ. ಆದರೆ ಅದನ್ನು ಹೇಗೆ ಸದ್ವಿನಿಯೋಗಿಸಬೇಕೆಂಬ ಸಂಸ್ಕಾರ ಭರಿತ ಮಾನಸಿಕತೆಯೂ ಇದೆ. ಪಿ.ಟಿ.ಗಣಪತಿ, ಮಹೇಶ್ ಸಾವನಿಯಂಥವರು ಈ ಸಮಾಜದಲ್ಲಿರುವುದು ಸಮಾಜದ ಆರೋಗ್ಯಕ್ಕೆ ಸಾಕ್ಷಿ.

Source – Sakhigeetha.com

ಅಪ್ರಾಪ್ತೆಯರ ಮೇಲಿನ ಅತ್ಯಾಚಾರಕ್ಕೆ ಕೊನೆ ಎಂದು….? – ನಾದಲೀಲೆ ನಾಗರಾಜು

0

ಹಸುಳೆಗಳ ಮೇಲೆ ಎರಗುವ ಈ ಕಾಮ ಪಿಶಾಚಿಗಳ ಬರ್ಬರ ಕೃತ್ಯಗಳ ಹುಟ್ಟಡಗಿಸಬೇಕು. ಇದು ಬರೀ ಕಾನ್ಮೂಭ ಪ್ರಶ್ನೆಯಲ್ಲ. ಇದು ಸಮಾಜದ ನೈತಿಕ ಜವಾಬ್ದಾರಿಯಲ್ಲವೇನು?
ಸಂಸ್ಕೃತಿ ಮತ್ತು ನಾಗರಿಕತೆಯ ಶ್ರಿÃಮಂತಿಕೆಯಲ್ಲಿ ಭಾರತ ದೇಶವು ವಿಶ್ವಕ್ಕೆà ಮಾದರಿಯೆನಿಸಿದೆ. ಶಾಂತಿ, ಸಹನೆ, ಸಹಬಾಳ್ವೆ, ಪೂಜನೀಯಭಾವ, ಸದ್ಗುಣಗಳಲ್ಲಿ ಭಾರತ ತನ್ನದೇ ಆದ ವಿಶಿಷ್ಟತೆಯನ್ನು ಮೆರೆದಿದೆ. ಶ್ರಿÃರಾಮನ ಸ್ತಿçÃಗೌರವ, ಲಕ್ಷö್ಮಣನ ಮಾತೃಭಕ್ತಿ, ಸರ್ವರಲ್ಲೂ ತಾಯಿಯನ್ನೆà ಕಾಣುವ ವಿವೇಕಾನಂದರಂಥ ಆದರ್ಶಪ್ರಾಯರು ನಾಡಿನ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದಾರೆ. ಮನು ಸೃತಿಯಲ್ಲೂ ಸಹ “ಯತ್ರ ನಾರ್ಯಂತು ಪೂಜ್ಯತೇ, ರಮಂತೇ ತತ್ರ ದೇವತಾ” ಎಂದು ಉಲ್ಲೆÃ್ಲಖಗೊಂಡಿರುವುದನ್ನು ಗಮನಿಸಬಹುದು. ಹೀಗಿದ್ದರೂ ಇಂದು ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹೇಯ ಕೃತ್ಯಗಳು ವಿಶ್ವವನ್ನೆà ಬೆಚ್ಚಿಬೀಳಿಸುವಂತಿದೆ.
“ನಿರ್ಭಯಾ”ಳಿಂದ ಹಿಡಿದು ಮೊನ್ನೆ ಮೊನ್ನೆ ನಡೆದ ಅಶಿಫಾ ಪ್ರಕರಣಗಳವರೆಗೆ ದೇಶದಲ್ಲಿ ಅಪ್ರಾಪ್ತೆಯರ ಮೇಲಾದ ದೌರ್ಜನ್ಯಗಳನ್ನು ಕಂಡಾಗ ನಿಜಕ್ಕೂ ಮನಸ್ಸಿಗೆ ನೋವಾಯಿತು. ಎತ್ತ ಸಾಗುತ್ತಿದೆ ನಮ್ಮ ಸಂಸ್ಕೃತಿಯ ಹಾದಿ, ಎತ್ತ ಸಾಗುತ್ತಿದೆ ನಮ್ಮ ಸ್ತಿçÃಯರ ಸ್ಥಾನಮಾನಗಳು? ಮನುಷ್ಯನ ಈ ಮೃಗೀಯ ವರ್ತನೆ ಅವನನ್ನು ಪ್ರಾಣಿಗಳಿಗಿಂತ ಕೀಳಾಗಿಸಿದೆ. ಇಂಥ ಪ್ರಕರಣಗಳು ಮುಸ್ಲಿಂ ರಾಷ್ಟçಗಳಲ್ಲಿ ನಡೆದರೆ ಅಲ್ಲಿನವರು ಅಂಥವರ ಮೇಲೆ ನಿರ್ದಾಕ್ಷಿಣ್ಯವಾದ ಶಿಸ್ತಿನ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ, ಅಂಥವರನ್ನು ಸಾರ್ವಜನಿಕವಾಗಿ ಗುಂಡಿಟ್ಟು ಕೊಲ್ಲತ್ತಾರೆ, ಅಥವಾ ಸಾರ್ವಜನಿಕವಾಗಿ ನೇಣು ಹಾಕುತ್ತಾರೆ. ನಮ್ಮಲ್ಲೂ ಇತ್ತಿÃಚೆಗೆ ಇಂತಹುದೇ ಪ್ರಕರಣವೊದರಲ್ಲಿ ಜಿಲ್ಲಾ ಸಶನ್ಸ್ ನ್ಯಾಯಾಲಯವು ಅಪರಾಧಿಗೆ ಮರಣದಂಡನೆಯನ್ನು ವಿಧಿಸಿದ್ದನ್ನು ನಾವು ಗಮನಿಸಬಹುದು.
ಆದರೆ ಈ ಎಲ್ಲ ದಂಡನೆಗಳಿಂದ ಇಂಥ ಹೇಯ ಕೃತ್ಯಗಳನ್ನು ತಡೆಗಟ್ಟಲು ಸಾಧ್ಯವೇ? ಉಗ್ರಶಿಕ್ಷೆಯನ್ನು ವಿಧಿಸುವಂತಹ ವಿದೇಶಗಳಲ್ಲಿ ಈ ಅಮಾನುಷತೆಯನ್ನು ಮೂಲೋತ್ಪಾಟಿಸಲಾಗಿದೆಯೇ? ಎಂಬ ಪ್ರಶ್ನೆಗಳನ್ನು ಹಾಕಿಕೊಂಡಾಗ, ನಮಗೆ ಸಿಗುವ ಉತ್ತರ ತೃಪ್ತಿಕರವಾಗಿರುವುದಿಲ್ಲ, ಅಲ್ಲೊಂದು ಇಲ್ಲೊಂದು ಇಂಥ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಹಾಗಾದರೆ ಇದರ ನಿರ್ಮೂಲನೆ ಹೇಗೆ? ಇದಕ್ಕೆ ಕಾರಣವೇನಿರಬಹುದು?
ಬದಲಾಗುತ್ತಿರುವ ನಾಗರಿಕತೆಯ ಸಾಮಾಜಿಕ ಶೈಲಿಯೇ ಇದಕ್ಕೆ ಮೂಲ ಕಾರಣ. ಇಂದಿನ ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳು, ನೇತ್ಯಾತ್ಮಕ ವಿಷಯಗಳನ್ನೆÃ ಢಾಳಾಗಿ ಬಿಂಬಿಸುತ್ತಿರುವ ಸಮಾಹ ಮಾಧ್ಯಮಗಳು, ಕಡಿವಾಣವಿಲ್ಲದ ಅಂತರ್ಜಾಲದ ಆಶ್ಲಿÃಲ ತಾಣಗಳು, ಜೊತೆಗೆ ಕುಸಿಯುತ್ತಿರುವ ಸಾಮಾಜಿಕ ಮತ್ತು ನೈತಿಕ ಮೌಲ್ಯಗಳು ಇತ್ಯಾದಿಗಳನ್ನು ಉದಾಹರಿಸಬಹುದು. ಹಿಂದೆ ಆಧ್ಯಾತ್ಮಕ ವಿಷಯಗಳನ್ನು ನಮ್ಮ ಸಮಾಜ ಆತ್ಯಂತ ಮಹತ್ವಪೂರ್ಣವಾಗಿ ಕಾಣುತ್ತಿತ್ತು. ಮೌಲ್ಯಗಳ ಆಚರಣೆ ವiನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿತ್ತು, ಹಾಗೆಂದ ಮಾತ್ರಕ್ಕೆ ಹೆಣ್ಣಿನ ಮೋಹ ಇರಲಿಲ್ಲವೆಂದೇನಲ್ಲ. ಅತ್ಯಾಚಾರಗಳು ಆಗಲೂ ನಡೆಯುತ್ತಿದ್ದವು, ಆದರೆ ಅದಕ್ಕೆ ವಯಸ್ಸಿನ ಮಿತಿಯಿತ್ತು, ಆದರೆ ಇಲ್ಲಿ ನಾವು ಗಮನಿಸಬೇಕಾದ ವಿಷಯವೊಂದಿದೆ, ಹಿಂದೆ ಹೆಣ್ಣುಮಕ್ಕಳು ವಯಸ್ಸಿಗೆ ಬರುವ ಮುಂಚೆಯೇ ಅಥವಾ ಋತುಮತಿಯಾದ ಕೂಡಲೇ ವಿವಾಹ ಮಾಡಿಬಿಡುತ್ತಿದ್ದರು. ಇದು ಮೂಢನಂಬಿಕೆಯಾದರೂ ಇಂಥ ಅಚಾತುರ್ಯಗಳು ಸಂಭವಿಸಬಹುದೇನೋ ಎಂಬ ಆತಂಕವೂ ಇರಬಹುದು. ಇದೆಲ್ಲ ಕೇವಲ ಊಹೆಯಷ್ಟೆ,
ಆದರೆ ನಾವು ವಿಚಾರಮಾಡಬೇಕಾದ ವಿಷಯ ಅದಲ್ಲ ಇಂಥ ಅಮಾನುಷ ದೌರ್ಜನ್ಯಗಳನ್ನು ತೊಡೆದುಹಾಕಲು ಏನು ಮಾಡಬೇಕೆನ್ನುವುದು. ಕೇವಲ ಮರಣದಂಡನೆ, ಜೀವಾವಧಿ, ಪಶ್ಚಾತ್ತಾಪಗಳಿಂದ ಇದರ ನಿವಾರಣೆ ಸಾಧ್ಯವಿಲ್ಲ. ಮೊದಲು ನಮ್ಮ ಮಾಧ್ಯಮಗಳ ದೃಷ್ಟಿಕೋನ ಬದಲಾಗಬೇಜು, ಯಾವುದನ್ನು ಢಾಳಾಗಿ ಬಿಂಬಿಸಬೇಕು? ಬಿಂಬಿಸಬಾರದು? ಎಂಬುದರ ಅರಿವಿರಬೇಕು. ಪಠ್ಯಕ್ರಮದಲ್ಲಿ ಮೌಲ್ಯ ಶಿಕ್ಷಣವನ್ನು ವಿಶೇಷ ಅಧ್ಯಯನವನ್ನಾಗಿಸಬೇಕು. ಸಮಾಜಕ್ಕೆ ಚಿಕಿತ್ಸಕ ಮನೋಭಾವವನ್ನು ಬೆಳೆಸಿಕೊಳ್ಳುವ ಸಮಾನತೆ, ಸಮಾನ ಗೌರವ, ಆದರತೆಗಳನ್ನು ರೂಢಿಸಿಕೊಳ್ಳುವಂಥ ಚಟುವಟಿಕೆಗಳನ್ನು ಸಾಮಾಜಿಕ ಸಂಘಸಂಸ್ಥೆಗಳು ಹಾಗು ರಾಜಕೀಯ ಸಂಘಟನೆಗಳು ಹಮ್ಮಿಕೊಳ್ಳಬೇಕು. ಎಲ್ಲಾ ಧರ್ಮಗಳ ಸಾರವಾಗಿರುವ, ಸಮಾಜದ ಆದರ್ಶಗಳನ್ನು ಎತ್ತಿ ಹಿಡಿಯುವ ಸಂದೇಶಗಳನ್ನು ಸಾರುವ ಚಲನಚಿತ್ರಗಳನ್ನು ಈಗಿನ ನಿರ್ದೇಶಕರು ರೂಪಿಸಬೇಕು.
ಇದೆಲ್ಲದರ ಜೊತೆಗೆ ಅಪ್ರಾಪ್ತೆಯರ ಮೇಲಾಗುವ ದೌರ್ಜನ್ಯಗಳಿಂದ ಆಗುವ ದುಷ್ಪರಿಣಾಮಗಳ ಕುರಿತ ತಿಳಿವಳಿಕೆಯನ್ನು ಸಮಾಜಕ್ಕೆ ನೀಡುವ ಕಾರ್ಯವಾಗಬೇಕು. ಆಗ ಮಾತ್ರ ಇದರ ಅಟ್ಟಹಾಸವನ್ನು ಕ್ರಮೇಣವಾಗಿ ತೊಡಯಬಹುದು. ಇಂತಹ ಕಾರ್ಯಗಳು ಇನ್ನಾದರೂ ನಮ್ಮ ದೇಶದಲ್ಲಿ ಆಗುವ ಅನಿವಾರ್ಯತೆ ಇದೆ.

ಈ ಸಂದರ್ಭಕ್ಕೆ ಉಲ್ಲೆÃಖಿಸಬಹುದಾದ ಕವಿತೆ:-
ಯಾಕಿಂತು ದುರ್ಮಾರ್ಗಿಗಳಾಗಿದ್ದಾರೆ
ಈ ಮಾನವರು?
ಎಲ್ಲ ಎಲ್ಲೆ ದಾಟಿ ಮೃಗಗಳಾದರೇ
ಈ ದಾನವರು!
ಅಮ್ಮ ಅಕ್ಕ ತಂಗಿ ಮಗಳು
ನೆನಪಾಗುವುದಿಲ್ಲವೇನು?
ಈ ಮರ್ಯಾದೆಗೆಟ್ಟ ಜನಕೆ
ಸಮಾಜವೇ ಬುದ್ಧಿ ಕಲಿಸಬೇಕು!
ಇಂಥ ಕೌರವ ಕೀಚಕ ದುಶ್ಯಾಸನರ
ಮೊದಲು ಹುಟ್ಟಡಗಿಸಬೇಕು!

Source – Sakhigeetha.com

ಕ್ರಾಂತಿ ನಿದ್ರಿಸುತ್ತಿದೆ: ಡಾಲ್ಟನ್ ಗಾರ್ಸಿಯಾ

0

ಹೆಬ್ಬಂಡೆಗಳ ಜನ್ಮ ದಿನಗಳನ್ನೆÃ ಅಳಿಸಿ ಹಾಕಿವೆ
ನಿಮ್ಮ ನೆರಳುಗಳು
ನಡುಹಗಲ ಬೆಳಕನ್ನೆÃ ನುಂಗಿ ಬಿಟ್ಟಿವೆ
ನಿಮ್ಮೆದುರು ಬಿರುಗಾಳಿಯೂ ಸುಳಿಯಲು ಭಯಪಡುತ್ತಿದೆ ಈಗ
ಕರಗಿ ಹೋಗಿವೆ ಹಿಮಗಿರಿಗಳು ಕಂಗಾಲಾಗಿ
ಸದಾ ನಿಗಿನಿಗಿಯಾದವರು ನಿದ್ರಿಸುವ ಸಮುದ್ರವೇ
ನಿಮ್ಮ ನೆರಳಿಗಂಜಿ ಜಡತ್ವದ ಜೋಗುಳಕ್ಕೊರಗಿ ನಿದ್ರಿಸುತ್ತಿದೆ ಕೂಸಂತೆ,
ಅಂಬೆಗಾಲಿಡುವ ಮಗುವಂತೆ
‘ಕ್ರಾಂತಿ’ ಈಗ ಮರಭೂಮಿಯಲ್ಲಿ ತೆವಳುತ್ತಿರುವ ಬಸವನ ಹುಳು
ಸೆಂಟ್ರಲ್ ಅಮೇರಿಕಾದ ಕವಿ ಡಾಲ್ಟನ್ ಗಾರ್ಸಿಯಾನ ಈ ಸಾಲುಗಳು ಜಾಗತಿಕವಾದವುಗಳೆ. ನಿಜಕ್ಕೂ ಎಲ್ಲ ಜನಾಂದೋಲನಗಳು ಜಿಡ್ಡುಗಟ್ಟಿದ, ಜೀವಕಳೆದುಕೊಂಡ ಮತ್ತು ದಾರಿ ತಪ್ಪಿದ ದುರದೃಷ್ಟದ ದಿನಗಳಿವು. ನಮ್ಮ ನಗರಗಳ ಸಂದಿ ಸಂದಿಗಳಲ್ಲಿ ಧರಣಿ, ಸತ್ಯಾಗ್ರಹ ಮತ್ತು ಹೋರಾಟದ ಭಿತ್ತಿ ಪತ್ರಗಳನ್ನು ನಾವು ನಿತ್ಯ ನೋಡುತ್ತೆÃವೆ. ಆದರೆ ಅಂಥ ಒಂದು ಹೋರಾಟ ನಿಜಕ್ಕೂ ನಡೆದಿದೆಯೆ ಎನ್ನುವಷ್ಟು ನಿಸ್ತೆÃಜಗೊಳ್ಳುತ್ತಲೇ ಹೊರಟಿದೆ ವರ್ತಮಾನ. ಪ್ರತಿ ಪತ್ರಿಕೆಯ ಪುಟ ಪುಟವೂ ರ‍್ಯಾಲಿ, ಮೋರ್ಚಾಗಳ ಫೋಟೊಗಳಿಂದ ತುಂಬಿ ಹೋಗಿವೆ.
ಆದರೆ ಅದು ಯಾವುದರತ್ತ ಕೇಂದ್ರಿಕೃತವಾಗಿದೆ ಮತ್ತು ನಮ್ಮ ಸಮಾಜದ ಯಾವ ವೈಫಲ್ಯವನ್ನು ಸರಿಗೊಳಿಸಿದೆ ಎನ್ನುವುದು ಇಂದಿಗೂ ಬಗೆ ಹರಿಯದ ಪ್ರಶ್ನೆ. ಡಾಲ್ಟನ್ ಗಾರ್ಸಿಯಾ ತನ್ನ ಕ್ರಾಂತಿ ಕವಿತೆಗಳನ್ನು ಹೊಸೆಯುವಾಗ ಇಂಥದೇ ಸ್ಥಿತಿ ನಿರ್ಮಾಣವಾಗಿತ್ತು. ಅಂತೆಯೇ ಆತ ವ್ಯಂಗ್ಯವಾಗಿ ಹೇಳುತ್ತಾನೆ, ‘ಕ್ರಾಂತಿ’ ಈಗ ಮರಭೂಮಿಯಲ್ಲಿ ತೆವಳುತ್ತಿರುವ ಬಸವನಹುಳು.
ಲ್ಯಾಟಿನ್ ಅಮೇರಿಕಾದ ಅತ್ಯಂತ ಪ್ರಭಾವಿ ಕವಿ ಡಾಲ್ಟನ್ ಗಾರ್ಸಿಯಾ. ವ್ಯಂಗ್ಯ, ಭಾವ ತೀವ್ರತೆ, ಬದುಕು, ಸಾವು, ಪ್ರಿÃತಿ, ಹೋರಾಟ ಮತ್ತು ರಾಜಕಾರಣದ ತಾತ್ವಿಕ ಪ್ರಶ್ನೆಗಳನ್ನೆತ್ತಿಕೊಂಡು ಹರಿಯುವ ಅವನ ಕಾವ್ಯಧಾರೆ ಒಂದರ್ಥದಲ್ಲಿ ಅಗ್ನಿಧಾರೆ.
ಇತಿಹಾಸಕಾರರು ಈತ ಒಂದು ಅಕ್ರಮ ಸಂತಾನ ಎಂದು ಹೇಳುವ ಕಥೆ ಅತ್ಯಂತ ಸರಳವಾಗಿದೆ. ಯಾವಾಗಲೂ ಕಾನೂನು ಬಾಹಿರವಾಗಿಯೇ ಬದುಕಿದ ಡಾಲ್ಟನ್ ಸಹೋದರರಲ್ಲಿ ಒಬ್ಬನಾದ ವಿನಾಲ್ ಡಾಲ್ಟನ್, ಮದುವೆಯಾಗಿದ್ದು ಮಕ್ಕಳೊಂದಿಗಿನ ಒಬ್ಬ ಕುಟುಂಬಸ್ಥ. ಕುಟುಂಬದ ಕದನವೊಂದರಲ್ಲಿ ಸಾಮೂಹಿಕ ಹತ್ಯೆಯಲ್ಲಿ ಬದುಕಿ ಉಳಿದ ಈತ ಆಸ್ಪತ್ರೆ ಸೇರುತ್ತಾನೆ. ಈತನ ಆರೈಕೆಗೆಂದೇ ನಿಯುಕ್ತಳಾದ ನರ್ಸ್ ಮಾರಿಯಾಳೊಂದಿಗೆ ದೈಹಿಕ ಸಂಬಂಧ ಮಾಡಿ ಈತ ರೋಕ್ ಡಾಲ್ಟನ್ ಗಾರ್ಸಿಯಾನಿಗೆ ಜನ್ಮ ನೀಡಿ ತಂದೆಯಾಗುತ್ತಾನೆ.
ತಂದೆಯ ಕರ್ಮಕಾಂಡಗಳೇನೆ ಇರಲಿ, ಅವುಗಳ ಬಗೆಗೆ ಎಂದೂ ಚಿಂತಿಸದೆ ಮಗನ ಮನಸ್ಸನ್ನು ಅದರತ್ತ ಎಂದೂ ಗಮನ ಹರಿಸದೆ ಅತ್ಯಂತ ಪರಿಶ್ರಮದಿಂದ ದುಡಿದು ಓರ್ವ ಸಭ್ಯಸ್ಥ ತಾಯಿಯಾಗಿ ಜೀವನವನ್ನು ರೂಪಿಸಿದವಳು ಮಾರಿಯಾ ಗಾರ್ಸಿಯಾ. ಸೆಲ್ವೆಡರ್‌ನ ಪ್ರತಿಷ್ಠಿತ ಶಾಲೆ-ಕಾಲೇಜುಗಳಲ್ಲಿಯೇ ಮಗನ ಶಿಕ್ಷಣವನ್ನು ಪೂರೈಸಲು ಪ್ರಾಣವನ್ನೆÃ ಪಣಕ್ಕಿಟ್ಟವಳಿವಳು. ಮಗ ರೋಕ್ ಗಾರ್ಸಿಯಾನೂ ಅಷ್ಟೆ. ಶಾಲಾ ದಿನಗಳಲ್ಲಿ ಅತ್ಯಂತ ತೀಕ್ಷ÷್ಣಮತಿಯೂ ಹಾಗೂ ಸೂಕ್ಷö್ಮ ಮನಸ್ಸಿನವನೂ ಆಗಿದ್ದವ.
ಸಮಾಜದ ಮೂದಲಿಕೆಯಿಂದ ಗಾರ್ಸಿಯಾನಿಗೆ ಹೊರಬರಲು ಆಗಲೇ ಇಲ್ಲ. ಶ್ರಿÃಮಂತ ವಿದ್ಯಾರ್ಥಿಗಳ ಬಗೆಗೆ ಶಿಕ್ಷಕರಿಗಿದ್ದ ಆಸೆ, ಅಕ್ರಮ ಮಕ್ಕಳನ್ನು ಅವರು ವ್ಯಂಗ್ಯ ಮಾಡುತ್ತಿದ್ದ ರೀತಿ, ಈತನ ಹುಟ್ಟಿನ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಸದಾ ಸಂಶಯದಿಂದ ನೋಡಿದ ಸ್ನೆÃಹಿತರು ಹಾಗೂ ಸಮಾಜ ಗಾರ್ಸಿಯಾನಲ್ಲಿ ಒಬ್ಬ ಅಪರೂಪದ ಕವಿ ಸಂಗಾತಿಗೆ ಹುಟ್ಟು ನೀಡಿತು. ಚಿಲಿಯ ಸ್ಯಾಂಟಿಗೊ ವಿಶ್ವವಿದ್ಯಾಲಯದಲ್ಲಿ ಹಾಗೂ ಯುನಿವರ್ಸಿಟಿ ಆಫ್ ಸೆಲ್ವೆಡಾರ್‌ನಲ್ಲಿ ಶಿಕ್ಷಣವನ್ನು ಪಡೆಯುತ್ತಲೇ ತನ್ನ ಕಾವ್ಯ ಸಂವೇದನೆಗಳನ್ನು ಗಾರ್ಸಿಯಾ ತೀಕ್ಷ÷್ಣಗೊಳಸಿಕೊಂಡ. ಈ ಸಂದರ್ಭದ ಒಂದು ಕವಿತೆಯ ಅವನ ಈ ಸಾಲುಗಳನ್ನು ನೀವು ಓದಲೇಬೇಕು –
ಉಪ್ಪು ಉಪ್ಪಾದ ಜ್ಞಾನವನ್ನು ಹುಗಿದಿಟ್ಟುಕೊಂಡಿದೆ ಸಮುದ್ರ
ಬೆಂಕಿಯಿಲ್ಲದ ಬೆಳಕು ಜಗವನಾವರಿಸಿದೆ
ಮೊಗವೆತ್ತಲು ಯತ್ನಿಸುವ ಸತ್ಯವೊಂದು ಇಡೀ ಆಕಾಶವನ್ನೆÃ ಘಾಸಿಗೊಳಿಸಿದೆ
ನಿಸ್ಸೊÃತ ದಡಗಳ ತೋಳುಗಳಲ್ಲಿ ಬಿದ್ದು ಬಿಟ್ಟಿದೆ ಸಮುದ್ರ
ಇದೇ ಅವಧಿ, ಕವಿ ಗಾರ್ಸಿಯಾ ಕಮ್ಯೂನಿಸ್ಟ ಪಾರ್ಟಿಯ ಸದಸ್ಯನಾಗಿ ಚಳುವಳಿಗೂ ಇಳಿದ. ಕ್ಯೂಬಾದ ಕ್ರಾಂತಿಯ ದಿನಗಳಲ್ಲಿ ಈತ ಒಬ್ಬ ಕಟ್ಟರ್ ಕಮ್ಯೂನಿಸ್ಟ್ ವಿದ್ಯಾರ್ಥಿಗಳನ್ನು ಹಾಗೂ ರೈತರನ್ನು ಕ್ರಾಂತಿಗೆ ಪೂರಕವಾಗಿ ಒಗ್ಗೂಡಿಸಿದ ಆಪಾದನೆಯ ಮೇರೆಗೆ ಪ್ರಬಲ ರಾಜಕಾರಣಿಗಳು ಹಾಗೂ ಭೂ ಮಾಲೀಕರೆಲ್ಲ ಸೇರಿ ಸರ್ಕಾರದ ಆಡಳಿತ ಯಂತ್ರವನ್ನು ಬಳಸಿಕೊಂಡು ಈತನನ್ನು ಎರಡು ಬಾರಿ ಬಂಧಿಸಿ ಜೈಲಿಗಟ್ಟಿದರು. ಸಾರ್ವಜನಿಕ ಸ್ಥಳದಲ್ಲಿ ಸ್ಕಡ್ ಹಾರಿಸಿದ ಆಪಾದನೆಯ ಮೇರೆಗೆ ಕೆಲಕಾಲ ದೇಶದಿಂದ ಗಡಿಪಾರುಗೊಳಿಸಿದರು. ಹದ್ದು ಮೀರಿ ಬಂದ ಈತನನ್ನು ಜೈಲೊಂದರಲ್ಲಿ ಬಂಧಿಸಿಟ್ಟರು. ಆದರೆ ಲಾವಾರಸವನ್ನು ಯಾರೂ ನಿಲ್ಲಿಸಲಾಗದು ಎನ್ನುವಂತೆ ಭೀಕರ ಭೂಕಂಪವಾಗಿ ಈತನನ್ನು ಬಂಧಿಸಿಟ್ಟ ಜೈಲು ಕುಸಿದು ಬಿದ್ದಿತು. ಬಂಧ ಮುಕ್ತನಾದ ಗಾರ್ಸಿಯಾ ಇಲ್ಲಿಂದ ಓಡಿಹೋಗಿ ಮತ್ತೆ ಕ್ಯೂಬಾ ಮತ್ತು ಪೆರಿಗ್ವೆಗಳಲ್ಲಿ ಹೋರಾಟಕ್ಕಿಳಿದುಕೊಂಡ.
೧೯೭೩ರಲ್ಲಿ ಸೆಲ್ವಿಡಾರ್‌ಗೆ ಬಂದು ಭೂಗತನಾಗಿದ್ದುಕೊಂಡೇ ಕ್ರಾಂತಿಯ ಕನಸನ್ನು ಕಾಪಿಟ್ಟುಕೊಂಡ. ತನ್ನಲ್ಲಿರುವ ಕವಿತೆಗೆ ಆತ ಅಭಿವ್ಯಕ್ತಿ ಕೊಟ್ಟಿದ್ದು ಕೂಡ ಮೆಕ್ಸಿಕೊದ ತನ್ನ ಪಲಾಯನದ ದಿನಗಳಲ್ಲಿ. ಈ ಸಂದರ್ಭದಲ್ಲಿ ಆತ ಅನೇಕ ಕ್ಯೂಬನ್ ಮತ್ತು ಲ್ಯಾಟಿನ್ ಅಮೇರಿಕನ್ ಉಚ್ಛಾಟಿತ ಕವಿಗಳ ಸಂಪರ್ಕಕ್ಕೆ ಬಂದ. ತಲೆಮರೆಸಿ ಕೊಂಡವನಾಗಿದ್ದುಕೊಂಡೇ ಏನೆಲ್ಲ ಮಾಡಬೇಕೆಂದುಕೊಂಡಿದ್ದ ಗಾರ್ಸಿಯಾನಿಗೆ ನಿರೀಕ್ಷಿಸಿದಷ್ಟು ಸಮಯ ಸಿಗಲಿಲ್ಲ. ಈತ ಅಡಗಿದ ತಾಣದ ಪತ್ತೆಯಾಗಿ ಇವನನ್ನು ಹೊರಗೆಳೆದು ಮತ್ತೆ ಜೈಲಿಗೆ ಅಟ್ಟುವವರೆಗೆ ಸರ್ಕಾರ ನಿದ್ರಿಸಲಿಲ್ಲ.
ಬದುಕಿನಲ್ಲಿ ಏನೆಲ್ಲ ಏರಿಳಿತಗಳನ್ನು ಕಂಡಿದ್ದ ಗಾರ್ಸಿಯಾ, ತನ್ನ ಕವಿತೆಗಳ ಮೂಲಕವೇ ರಾಜಕೀಯ ವೈರಿಗಳನ್ನು ಸೃಷ್ಠಿಸಿಕೊಂಡಿದ್ದ ಎನ್ನುತ್ತಾರೆ ಇತಿಹಾಸಕಾರರು. ತನ್ನ ಜೀವನದ ನಲವತ್ತನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಮುನ್ನಾದಿನ ಅಂದರೆ, ೧೦ ಮೇ ೧೯೭೫ರಲ್ಲಿ ರಾಜಕೀಯ ವೈರಿಯೊಬ್ಬನಿಂದ ಹತ್ಯೆಗೊಳಗಾಗುತ್ತಾನೆ. ಮೇ ತಿಂಗಳಲ್ಲಿಯೇ ಹುಟ್ಟಿ, ಮೇ ತಿಂಗಳಲ್ಲಿಯೇ ಮೃತ್ಯುಕೂಪಕ್ಕೆ ಜಾರಿದ ಗಾರ್ಸಿಯಾನ ಸಾವು ಒಂದು ರಾಷ್ಟಿçÃಯ ದುರಂತ ಎಂದು ಸಾರುವುದರೊಂದಿಗೆ ಸರ್ಕಾರ ಸ್ಟಾಂಪ್ ಪ್ರಕಟಿಸಿ ಸಾವಿನ ಲೆಕ್ಕವನ್ನು ಸರಿದೂಗಿಸುತ್ತದೆ.
ದೊಡ್ಡ ದೊಡ್ಡ ಜೈಲುಗಳು, ಗಲ್ಲಿನ ಆದೇಶಗಳು, ಗಡಿಪಾರಿನ ಸಂದರ್ಭಗಳು ಹಾಗೂ ಸಾರ್ವಜನಿಕ ಆಕ್ರಮಣಗಳು ಗಾರ್ಸಿಯಾನ ಬದುಕನ್ನು ಎಂದೂ ಬಾಧಿಸಲಿಲ್ಲ ಅಥವಾ ಅದಕ್ಕೊಂದು ಭಯಾನಕ ಅಂತ್ಯವನ್ನು ಹಾಡಲಿಲ್ಲ. ಬದಲಾಗಿ ರಾಜಕಾರಣ ಈತನ ಬದುಕನ್ನು ಮುಗಿಸಿತು.

Source – Sakhigeetha.com